ಮಹಾರಾಷ್ಟ್ರದಲ್ಲಿ ಹಿಂದಿ 3ನೇ ಕಡ್ಡಾಯ ಭಾಷೆ; ನಾವು ಹಿಂದೂಗಳು, ಹಿಂದಿ ಅಲ್ಲ ಎಂದ ರಾಜ್‌ ಠಾಕ್ರೆ

Picture of Savistara

Savistara

Bureau Report

2025-26ನೇ ಶೈಕ್ಷಣಿಕ ವರ್ಷದಿಂದ ಎನ್‌ಇಪಿ ಜಾರಿಯಾಗಿದೆ. ಮರಾಠಿ ಮತ್ತು ಇಂಗ್ಲಿಷ್‌ ಬಳಿಕ ಹಿಂದಿ ಭಾಷೆ ಕಲಿಕೆಯು 3ನೇ ಕಡ್ಡಾಯ ಭಾಷೆಯಾಗಿದೆ. 1ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸಲಾಗುತ್ತದೆ. ಹೊಸ ನೀತಿಯಡಿಯಲ್ಲಿ, ಮಹಾರಾಷ್ಟ್ರವು 5+3+3+4 ಶೈಕ್ಷಣಿಕ ನೀತಿ ರಚನೆಯನ್ನು ಅಳವಡಿಸಿಕೊಳ್ಳಲಿದೆ. ಭಾಷಾ ನೀತಿಯ ಭಾಗವಾಗಿ, ಆರಂಭಿಕ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲಾಗುವುದು. ಈ ಪರಿವರ್ತನೆಯನ್ನು ಬೆಂಬಲಿಸಲು, ರಾಜ್ಯ ಸರಕಾರವು 2025 ರ ವೇಳೆಗೆ 80% ಶಿಕ್ಷಕರಿಗೆ ಹೊಸ ಶಿಕ್ಷಣ ವಿಧಾನಗಳು ಮತ್ತು ಡಿಜಿಟಲ್‌ ಪರಿಕರಗಳಲ್ಲಿತರಬೇತಿ ನೀಡಲು ಯೋಜಿಸಿದೆ.

ಮುಂಬಯಿ: ಮಹಾರಾಷ್ಟ್ರ ಸರಕಾರವು ರಾಷ್ಟ್ರೀಯಯ ಶಿಕ್ಷಣ ನೀತಿಗೆ ಪೂರಕವಾಗಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಹಿಂದಿಯನ್ನು ಮೂರನೇ ಕಡ್ಡಾಯ ಭಾಷೆಯಾಗಿ ಅನುಷ್ಠಾನ ಮಾಡುವುದು ಯೋಜನೆಯ ಪ್ರಮುಖ ಅಂಶವಾಗಿದೆ. ಮರಾಠಿ ಹಾಗೂ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ1 ರಿಂದ 5ನೇ ತರಗತಿವರೆಗೆ ಹಿಂದಿ ಭಾಷೆಯನ್ನು ಮೂರನೇ ಭಾಷೆಯಾಗಿ ಕಡ್ಡಾಯವಾಗಿ ಕಲಿಸಲಾಗುವುದು.

2025-26ನೇ ಶೈಕ್ಷಣಿಕ ವರ್ಷದಿಂದ ಎನ್‌ಇಪಿ ಜಾರಿಯಾಗಿದೆ. ಮರಾಠಿ ಮತ್ತು ಇಂಗ್ಲಿಷ್‌ ಬಳಿಕ ಹಿಂದಿ ಭಾಷೆ ಕಲಿಕೆಯು 3ನೇ ಕಡ್ಡಾಯ ಭಾಷೆಯಾಗಿದೆ. 1ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸಲಾಗುತ್ತದೆ. ಹೊಸ ನೀತಿಯಡಿಯಲ್ಲಿ, ಮಹಾರಾಷ್ಟ್ರವು 5+3+3+4 ಶೈಕ್ಷಣಿಕ ನೀತಿ ರಚನೆಯನ್ನು ಅಳವಡಿಸಿಕೊಳ್ಳಲಿದೆ.

2020ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯ ಜಾರಿಯ ಭಾಗವಾಗಿ ದೇಶಾದ್ಯಂತ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ ರಾಜ್ ಠಾಕ್ರೆ ಗುರುವಾರ ವಿರೋಧಿಸಿದ್ದಾರೆ. ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿರುವ ಅವರು, ಯಾವುದೇ ರೀತಿಯ ಬಲವಂತವನ್ನು ತನ್ನ ಪಕ್ಷ ಸಹಿಸಲಾರದು ಹಾಗೂ ಮಹಾರಾಷ್ಟ್ರವನ್ನು ಹಿಂದೀಕರಣಗೊಳಿಸಲು ಕೇಂದ್ರ ಸರಕಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಅವರು ಹೇಳಿದ್ದಾರೆ.

ಭಾಷಾ ನೀತಿಯ ಭಾಗವಾಗಿ, ಆರಂಭಿಕ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲಾಗುವುದು. ಈ ಪರಿವರ್ತನೆಯನ್ನು ಬೆಂಬಲಿಸಲು, ರಾಜ್ಯ ಸರಕಾರವು 2025 ರ ವೇಳೆಗೆ 80% ಶಿಕ್ಷಕರಿಗೆ ಹೊಸ ಶಿಕ್ಷಣ ವಿಧಾನಗಳು ಮತ್ತು ಡಿಜಿಟಲ್‌ ಪರಿಕರಗಳಲ್ಲಿತ ರಬೇತಿ ನೀಡಲು ಯೋಜಿಸಿದೆ.

ನಾವು ಹಿಂದೂಗಳು. ಆದರೆ, ಹಿಂದಿ ಅಲ್ಲ

ನಾವು ಹಿಂದೂಗಳು. ಆದರೆ, ಹಿಂದಿ ಅಲ್ಲ. ಮಹಾರಾಷ್ಟ್ರವನ್ನು ಹಿಂದಿ ಭಾಷೆ ಆವರಿಸುವಂತೆ ಮಾಡಲು ಹುನ್ನಾರ ನಡೆಸಿದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ. ಸರಕಾರವೇ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದೆ. ಮರಾಠಿ ಭಾಷಿಕರು ಹಾಗೂ ಇತರ ಭಾಷಿಕರ ನಡುವೆ ಬಿರುಕು ಮೂಡಿಸಿ ಮತ ಗಳಿಕೆಗೆ ಯತ್ನ ನಡೆಯುತ್ತಿದೆ ಎಂದು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿದರು.

ನಿಮ್ಮ ತ್ರಿಭಾಷಾ ಸೂತ್ರವನ್ನು ಸರ್ಕಾರಿ ವಹಿವಾಟುಗಳಿಗೆ ಸೀಮಿತಗೊಳಿಸಿ. ಅದನ್ನು ಶಿಕ್ಷಣಕ್ಕೆ ವಿಸ್ತರಿಸಬೇಡಿ. ಈ ದೇಶವನ್ನು ಭಾಷಾವಾರು ಆಧಾರದ ಮೇಲೆ ಮರುಸಂಘಟಿಸಲಾಯಿತು ಮತ್ತು ಹಲವು ವರ್ಷಗಳಿಂದ ಅದು ಅಸ್ತಿತ್ವದಲ್ಲಿದೆ ಎಂದಿದ್ದಾರೆ. ನಿಮ್ಮ ತ್ರಿಭಾಷಾ ಸೂತ್ರವನ್ನು ಸರ್ಕಾರಿ ವಹಿವಾಟುಗಳಿಗೆ ಸೀಮಿತಗೊಳಿಸಿ. ಅದನ್ನು ಶಿಕ್ಷಣಕ್ಕೆ ವಿಸ್ತರಿಸಬೇಡಿ. ಈ ದೇಶವನ್ನು ಭಾಷಾವಾರು ಆಧಾರದ ಮೇಲೆ ಮರುಸಂಘಟಿಸಲಾಯಿತು ಮತ್ತು ಹಲವು ವರ್ಷಗಳಿಂದ ಅದು ಅಸ್ತಿತ್ವದಲ್ಲಿದೆ ಎಂದಿದ್ದಾರೆ.

ಮಹಾರಾಷ್ಟ್ರದ ಮೇಲೆ ಬೇರೆ ರಾಜ್ಯದ ಭಾಷೆಯನ್ನು ಹೇರಲು ಏಕೆ ಪ್ರಯತ್ನಿಸಲಾಗುತ್ತಿದೆ? ಇದು ಭಾಷಾ ಪುನರ್ರಚನೆಯ ತತ್ವದ ಮೇಲಿನ ದಾಳಿಯಲ್ಲದೆ ಬೇರೇನೂ ಅಲ್ಲ. ಪ್ರತಿಯೊಂದು ಭಾಷೆ ತನ್ನದೇ ಆದ ರೀತಿಯಲ್ಲಿ ಸುಂದರವಾಗಿರುತ್ತದೆ ಮತ್ತು ಅದರ ವಿಕಾಸದ ಹಿಂದೆ ದೀರ್ಘ ಇತಿಹಾಸ ಮತ್ತು ಸಂಪ್ರದಾಯವಿದೆ. ಒಂದು ರಾಜ್ಯದ ಭಾಷೆಯನ್ನು ಆ ರಾಜ್ಯದಲ್ಲಿ ಗೌರವಿಸಬೇಕು. ಮಹಾರಾಷ್ಟ್ರದಲ್ಲಿ ಮರಾಠಿಯೇತರ ಭಾಷಿಕರಿಂದ ಮರಾಠಿಯನ್ನು ಗೌರವಿಸಬೇಕಾದಂತೆಯೇ, ಇತರ ರಾಜ್ಯಗಳ ಭಾಷೆಯನ್ನು ಆ ರಾಜ್ಯಗಳ ಎಲ್ಲಾ ಭಾಷಾ ಸಮುದಾಯಗಳು ಗೌರವಿಸಬೇಕು.

[t4b-ticker]
error: Content is protected !!