ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಅಕ್ರಮ ಹೋಮ-ಹವನ’ ದಂಧೆ: ಮನೆಮನೆಗಳಲ್ಲೂ ಯಾಗಶಾಲೆ | ಪೂಜೆ ಹೆಸರಲ್ಲಿ ಭಕ್ತರ ಜೇಬಿಗೆ ಕತ್ತರಿ

Picture of Savistara

Savistara

Bureau Report

ಸುಬ್ರಹ್ಮಣ್ಯ:ರಾಜ್ಯದ ಅತ್ಯಂತ ಪ್ರಸಿದ್ಧ ಹಾಗೂ ಗರಿಷ್ಠ ಆದಾಯ ತರುವ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಕ್ರಮ ಪೂಜಾ ಕೈಂಕರ್ಯಗಳ ದಂಧೆ ದಿನೇ ದಿನೇ ಮಿತಿಮೀರಿದ್ದು, ದೇವಸ್ಥಾನದ ಪವಿತ್ರತೆಗೆ ಧಕ್ಕೆ ತರುವ ಜೊತೆಗೆ ಭಕ್ತಾದಿಗಳ ಆಕ್ರೋಶಕ್ಕೂ ಕಾರಣವಾಗಿದೆ.​ಕ್ಷೇತ್ರಕ್ಕೆ ಆಗಮಿಸುವ ಮುಗ್ಧ ಭಕ್ತಾದಿಗಳನ್ನು ಗುರಿಯಾಗಿಸಿಕೊಂಡು, ದೇವಸ್ಥಾನದ ಆಸುಪಾಸಿನ ಗಲ್ಲಿ-ಗಲ್ಲಿಗಳಲ್ಲಿ ಅಕ್ರಮ ಹೋಮಕುಂಡಗಳು ಹಾಗೂ ಯಾಗಶಾಲೆಗಳು ಅಣಬೆಗಳಂತೆ ತಲೆಎತ್ತಿವೆ.​

ಸಿಕ್ಕ-ಸಿಕ್ಕ ಜಾಗದಲ್ಲೇ ‘ಅಕ್ರಮ ಯಾಗಶಾಲೆ’​ಸುಬ್ರಹ್ಮಣ್ಯ ಪರಿಸರದ ಖಾಸಗಿ ಮನೆಗಳ ಸಿಟೌಟ್, ಕಾರ್ ಸೆಡ್, ಪಂಪ್ ಸೆಡ್‌ಗಳು ಹಾಗೂ ಮಹಡಿಗಳ ಮೇಲಷ್ಟೇ ಅಲ್ಲದೆ, ಸಿಕ್ಕಸಿಕ್ಕ ಜಾಗಗಳಲ್ಲೆಲ್ಲ ನಿಯಮಬಾಹಿರವಾಗಿ ದಿನಕ್ಕೊಂದು ಪೂಜಾ ಮಂಟಪಗಳು ಸೃಷ್ಟಿಯಾಗುತ್ತಿವೆಯಾವುದೇ ಅನುಮತಿಯಿಲ್ಲದೆ ಈ ಅಕ್ರಮ ಹೋಮ-ಹವನಗಳನ್ನು ನಡೆಸಲಾಗುತ್ತಿದೆ. ಪೂಜೆ ಹೆಸರಿನಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಪೀಕುವ ಮೂಲಕ ಸುಲಿಗೆ ಕೋರರ ಜಾಲ ಸಕ್ರಿಯವಾಗಿದೆ ಇದರಿಂದಾಗಿ ದೇವಸ್ಥಾನದ ಪವಿತ್ರತೆಗೆ ದಕ್ಕೆ ಉಂಟಾಗುತ್ತಿದೆ .​ಆಡಳಿತ ಮಂಡಳಿ, ಅಧಿಕಾರಿಗಳ ಮೌನ: ಪ್ರಭಾವಿಗಳ ಕೈವಾಡ?​ಇಷ್ಟೆಲ್ಲಾ ಅಕ್ರಮಗಳು ದೇವಸ್ಥಾನದ ಮೂಗಿನ ತುದಿಯಲ್ಲೇ ನಡೆಯುತ್ತಿದ್ದರೂ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದ್ದು ​ಈ ಇಡೀ ಅಕ್ರಮ ದಂಧೆಯ ಹಿಂದೆ ಕೆಲವು ಪ್ರಭಾವಿ ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಕೈವಾಡವಿದೆ ಎಂಬ ಮಾತು ಸಾರ್ವಜನಿಕರ ಮಧ್ಯ ವ್ಯಕ್ತವಾಗುತ್ತಿದೆ ​ದೇವಸ್ಥಾನದ ಪವಿತ್ರತೆಗೆ ಧಕ್ಕೆ ತರುತ್ತಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.​”ಇದು ಕರ್ನಾಟಕದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಕ್ಕೆ ಮಾಡುತ್ತಿರುವ ಅಪಚಾರ. ದೇವಸ್ಥಾನದ ಹೆಸರಿನಲ್ಲಿ ನಡೆಯುತ್ತಿರುವ ಈ ಸುಲಿಗೆ ದಂಧೆಗೆ ತಕ್ಷಣವೇ ಮುಕ್ತಿ ಸಿಗಬೇಕು. ತಾಲೂಕು ಆಡಳಿತ, ಮುಜರಾಯಿ ಇಲಾಖೆ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ತಕ್ಷಣವೇ ಜಾಗೃತರಾಗಿ, ಅಕ್ರಮ ಯಾಗಶಾಲೆಗಳ ಮೇಲೆ ದಾಳಿ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.” ಭಕ್ತಾದಿಗಳು ಹಾಗೂ ಸಾರ್ವಜನಿಕರು​ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ ​ಧಾರ್ಮಿಕ ಕ್ಷೇತ್ರದ ಸೌಹಾರ್ದತೆ, ಪರಂಪರೆ ಮತ್ತು ಪವಿತ್ರತೆಯನ್ನು ಉಳಿಸಲು ಮುಜರಾಯಿ ಇಲಾಖೆ ಹಾಗೂ ಜಿಲ್ಲಾಡಳಿತ ಈಗಲಾದರೂ ಕಠಿಣ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ

[t4b-ticker]
error: Content is protected !!