ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂಬ ಆಗ್ರಹ ದೇಶಾದ್ಯಂತ ಕೇಳಿ ಬಂದಿದೆ. ಬೆನ್ನಲ್ಲೇ ಪ್ರಧಾನಿ ಮೋದಿ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಇನ್ನೂ ಉಗ್ರರ ದಾಳಿ ಟೈಂನಲ್ಲಿ ಅಲ್ಲಾಹು ಅಕ್ಬರ್ ಅಂತ ಕೂಗಿ ಎನ್ಐಎ ಆಫೀಸ್ಗೆ ಗೆಸ್ಟ್ ಆಗಿದ್ದ ಜಿಪ್ಲೈನ್ ಆಪರೇಟರ್ ರಿಲೀಸ್ ಆಗಿದ್ದಾನೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಭಾರತೀಯ ಸೇನೆಗೆ ಮೋದಿ ಸರ್ಕಾರ ಫುಲ್ ಪವರ್ ಕೊಟ್ಟಿದೆ. ಸದ್ಯಕ್ಕೀಗ ಇಂಡಿಯನ್ ಆರ್ಮಿ ಕೈಯಲ್ಲಿ ಪಾಕಿಸ್ತಾನದ ಭವಿಷ್ಯ ಅಡಗಿದೆ. ಅದಕ್ಕೆ ಕಾರಣ ದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರೋ ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ ನಡೆದ ಮಹತ್ವದ ಮೀಟಿಂಗ್. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ. ಮೂರು ವಿಭಾಗಗಳ ಸೇನಾ ಮುಖ್ಯಸ್ಥರ ಜೊತೆ ಮಹತ್ವದ ಚರ್ಚೆ ನಡೆಸಿ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಪಾಕ್ ಮೇಲೆ ಯುದ್ಧ ಮಾಡಬೇಕೋ.. ಬೇಡವೋ.. ಎಂಬ ಬಗ್ಗೆ ಚರ್ಚೆ ನಡೆದಿದ್ದು, ಈ ವೇಳೆ ಭಾರತೀಯ ಸೇನೆಗೆ ಪ್ರಧಾನಿ ಮೋದಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.
ಸೇನೆಗೆ ಪರಮಾಧಿಕಾರ!ಸಭೆಯಲ್ಲಿ 3 ಸೇನೆಗಳಿಗೂ ಮುಕ್ತ ಸ್ವಾತಂತ್ರ್ಯ ನೀಡಿದ ಮೋದಿ ಹೋರಾಡಲು ಕೇಂದ್ರ ಸರ್ಕಾರದಿಂದ ಸೇನೆಗೆ ಮುಕ್ತ ಅವಕಾಶ ಇನ್ನು ಮುಂದೆ ತನ್ನ ಕಾರ್ಯ ನಡೆಸಲು ಯಾವ ಅಡೆತಡೆ ಇಲ್ಲ ನಮಗೆ ಸೇನೆ ಮೇಲೆ ಪೂರ್ಣ ಪ್ರಮಾಣದಲ್ಲಿ ನಂಬಿಕೆ ಇದೆ ಅವಕಾಶ ಕೊಟ್ಟಿದ್ದೀವಿ, ಸಮಯ ಮತ್ತು ಸ್ಥಳ ನೀವೆ ನಿರ್ಧರಿಸಿಪಹಲ್ಗಾಮ್ ಜಿಪ್ಲೈನ್ ಆಪರೇಟರ್ ರಿಲೀಸ್ಭಯೋತ್ಪಾದಕ ದಾಳಿಯ ಸಮಯದಲ್ಲಿ ರೋಪ್ ಕ್ರಾಸಿಂಗ್ ವೇಳೆ ಅಲ್ಲಾಹು ಅಕ್ಬರ್ ಎಂದು ಮೂರು ಬಾರಿ ಕೂಗಿದ್ದ ಜಿಪ್ಲೈನ್ ಆಪರೇಟರ್ ಮುಜಾಮಿಲ್ನನ್ನ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಉಗ್ರರ ದಾಳಿಯಲ್ಲಿ ಮುಜಾಮಿಲ್ ನೇರ ಕೈವಾಡವಿಲ್ಲವಾದ್ರೂ ಉಗ್ರರು ಗುಂಡು ಹಾರಿಸುವ ವೇಳೆ ಮುಜಾಮಿಲ್ ಏಕೆ ಅಲ್ಲಾಹು ಅಕ್ಬರ್ ಅಂತ ಮೂರು ಬಾರಿ ಹೇಳಿದ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಕೆಲ ಗಂಟೆಗಳ ವಿಚಾರಣೆ ಬಳಿಕ ಆತನನ್ನ ತನಿಖಾಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ.ಆಪರೇಟರ್ ದಾಳಿಗೂ ಮುನ್ನ ಅಲ್ಲಾಹು ಅಕ್ಬರ್ ಅಂತ ಕೂಗಿರೋದು ಸಾಮಾನ್ಯವಾಗಿ.. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ.. ಹಿಂದೂಗಳು ಹೇಗೆ ಜೈ ಶ್ರೀ ರಾಮ್ ಎಂದು ಕೂಗುತ್ತಾರಲ್ಲ.. ಅದೇ ರೀತಿ ಆತ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾನೆ ಎಂದು ಹೇಳಲಾಗ್ತಿದೆ. ಒಟ್ನಲ್ಲಿ.. ಕೇಂದ್ರ ಸರ್ಕಾರ ತನ್ನ ಮೇಲೆ ಇದ್ದ ಭಾರವನ್ನ ಆರ್ಮಿಗೆ ವರ್ಗಾಯಿಸಿ ಸೇನೆಗೆ ಪರಮಾಧಿಕಾರ ಕೊಟ್ಟಿದೆ. ಈ ಅಧಿಕಾರವನ್ನ ಸೇನಾ ಮುಖ್ಯಸ್ಥರು ಯಾವ ರೀತಿ ನಿಭಾಯಿಸುತ್ತಾರೋ ಕಾದು ನೋಡಬೇಕಿದೆ.













































