ಐಟಿ ರಿಟರ್ನ್ಸ್ ಸಲ್ಲಿಸುತ್ತಿದ್ದೀರಾ? ಬಿಪಿಎಲ್ ಕಾರ್ಡ್ ಹೋದರೆ 2,000 ಹಣಕ್ಕೂ ಕತ್ತರಿ!

Picture of Savistara

Savistara

Bureau Report

ರಾಜ್ಯ ಸರ್ಕಾರವು ಪಡಿತರ ಚೀಟಿಗಳ ಪರಿಷ್ಕರಣೆಗೆ ಮುಂದಾಗಿದ್ದು, ನಿಯಮಬಾಹಿರವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಪತ್ತೆಹಚ್ಚಿ ರದ್ದುಗೊಳಿಸುತ್ತಿದೆ. ಈ ಕ್ರಮದ ಬೆನ್ನಲ್ಲೇ, ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಅವರು ಒಂದು ಮಹತ್ವದ ಮಾಹಿತಿ ನೀಡಿದ್ದಾರೆ. ಯಾರು ಆದಾಯ ತೆರಿಗೆ ಪಾವತಿಸುತ್ತಿದ್ದರೂ ಸಹ ಬಿಪಿಎಲ್ ಕಾರ್ಡ್ ಪಡೆದು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೋ, ಅಂತಹವರ ಕಾರ್ಡ್ ರದ್ದಾದ ತಕ್ಷಣ ಅವರ ಬ್ಯಾಂಕ್ ಖಾತೆಗೆ ಬರುತ್ತಿದ್ದ 2,000 ಹಣವೂ ಸ್ಥಗಿತಗೊಳ್ಳಲಿದೆ.

ಆದಾಯ ತೆರಿಗೆ ಪಾವತಿಸುವವರು ಬಿಪಿಎಲ್‌ ಕಾರ್ಡ್ ಹೊಂದಲು ಅರ್ಹರಲ್ಲ. ಅಂತಹ ಕಾರ್ಡ್‌ಗಳನ್ನು ಸರ್ಕಾರ ಪತ್ತೆಹಚ್ಚಿರದ್ದು ಮಾಡುತ್ತಿದೆ.ಗೃಹಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ ಮಾನದಂಡವಾಗಿರುವುದರಿಂದ, ಕಾರ್ಡ್ ರದ್ದಾದ ಕೂಡಲೇ ಯೋಜನೆಯ ಸೌಲಭ್ಯವೂ ತಾನಾಗಿಯೇ ಸ್ಥಗಿತವಾಗುತ್ತದೆ.

ಸರ್ಕಾರದ ಸೌಲಭ್ಯಗಳು ಕೇವಲ ನಿಜವಾದ ಬಡವರಿಗೆ ಮತ್ತು ಅರ್ಹರಿಗೆ ತಲುಪಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

[t4b-ticker]
error: Content is protected !!