ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಂಬನ್ ದ್ವೀಪದಲ್ಲಿನ ಪವಿತ್ರ ರಾಮೇಶ್ವರಂ ದೇವಸ್ಥಾನಕ್ಕೆ ಸಂಸದ ರಾಘವೇಂದ್ರ ಬಿ ವೈ ಕುಟುಂಬ ಸಮೇತ ಭೇಟಿ ನೀಡಿದರು.

ಪುರಾಣ ಪ್ರಸಿದ್ಧಿಯಂತೆ ಸ್ವಯಂ ಪ್ರಭು ಶ್ರೀರಾಮರಿಂದ ಪ್ರತಿಷ್ಠಾಪಿತವಾದ ಶಿವಲಿಂಗದ ದರ್ಶನದಿಂದ ಮನಸ್ಸಿಗೆ ಶಾಂತಿ ಹಾಗೂ ಆತ್ಮತೃಪ್ತಿ ದೊರಕಿತು.

ಈ ಪವಿತ್ರ ಕ್ಷೇತ್ರದ ದರ್ಶನವು ಭಕ್ತಿ ಮತ್ತು ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎಂದು ಎಂದು ರಾಘವೇಂದ್ರ ಬಿ ವೈ ಹೇಳಿದರು.













































