Savistara Kannada News

Latest Post

 



ಕಾಂಗ್ರೆಸ್ ನಾಯಕ ಸ್ಯಾಮ್ ಪಿಟ್ರೊಡಾ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನ ಬಣ್ಣ,ಆಕಾರ ಗಳ ಜನರನ್ನು ಕಾಣಸಿಗುತ್ತಾರೆ,ಪೂರ್ವ ದಲ್ಲಿ ಚೈನೀಸ್ ಗಳಂತೆ ದಕ್ಷಿಣ ಭಾರತ ದಲ್ಲಿ ಆಫ್ರಿಕಾದ ನಿಗ್ರೋಗಳಂತೆ ಭಾಸವಾಗುತ್ತಾರೆಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡ ಅಣ್ಣಾ ಮಲೈ ಟಾಂಗ್ ನೀಡಿದ್ದು ನಾನೊಬ್ಬ ಕಪ್ಪು ಮೈ  ಚರ್ಮ ಬಣ್ಣ ಹೊಂದಿರುವ ಭಾರತೀಯ ಹೇಳಲು ಹೆಮ್ಮೆಯಿದೆಯೆಂದು ತನ್ನ ಫೇಸ್ ಬುಕ್ ವಾಲ್ ಪೋಸ್ಟ್ ಮಾಡಿದ್ದಾರೆ.






ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.


ಕೇದೆ ಸುಬ್ಬ ಪೂಜಾರಿ - ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಕೊನೆಯುಸಿರೆಳೆದಿದ್ದು, ಮೇ 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಿಜೆಪಿ ರಾಜ್ಯದಲ್ಲಿ ಖಾತೆ ತೆರೆದಾಗ ಯಡಿಯೂರಪ್ಪ ಜೊತೆ ವಿಧಾನಸಭೆ ಯಲ್ಲಿ ಶಾಸಕರಾಗಿದ್ದರು,ನಂತರ ಜನತಾ ದಳ,ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿದ್ದರು.



 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಎಸ್ಸೆಸ್ಸೆಲ್ಸಿ 2024 ಪರೀಕ್ಷೆ- 1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮೇ.9 ರಂದು ಪ್ರಕಟವಾಗಲಿದೆ.ಎಂದು ಶಾಲಾ ಪರೀಕ್ಷೆ  ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಣೆಯಲ್ಲಿ ತಿಳಿಸಿದೆ.





ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಫಲಿತಾಂಶದ ಕ್ರೋಢೀಕರಣದ ಕಾರ್ಯ ಅಂತಿಮ ಹಂತದಲ್ಲಿದೆ. ಮೇ.9ರಂದು ಪ್ರಕಟಿಸಲು ಮಂಡಳಿ ನಿರ್ಧರಿಸಿದೆ. ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ ವೆಬ್‌ಸೈಟ್‌ನಲ್ಲಿ ನೋಡಬಹುದು. ಇದಕ್ಕೆ ನೀವು kseab.karnataka.gov.in ಗೆ ಭೇಟಿ ನೀಡಬಹುದು.





ಈ ಬಾರಿ ಮೂರು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆ ಮೂರೂ ಪರೀಕ್ಷೆ ಬರೆದವರು ಹೆಚ್ಚು ಅಂಕಗಳು ಯಾವ ಪರೀಕ್ಷೆಯಲ್ಲಿ ಬಂದಿರುತ್ತದೋ ಆ ಫಲಿತಾಂಶವನ್ನು ಉಳಿಸಿಕೊಳ್ಳುವ ಅವಕಾಶ ದೊರೆಯಲಿದೆ. ಪ್ರತಿ ವಿದ್ಯಾರ್ಥಿಗಳು ಮೂರೂ ಪರೀಕ್ಷೆ ಬರೆಯುವುದು ಕಡ್ಡಾಯವಲ್ಲ. ಮೊದಲ ಅಥವಾ ವಾರ್ಷಿಕ ಪರೀಕ್ಷೆಯಲ್ಲಿ ಬಂದ ಫಲಿತಾಂಶದಲ್ಲಿ ಸಮಾಧಾನವಿದ್ದರೆ ಎರಡನೇ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಸಮಾಧಾನ ಇಲ್ಲದಿದ್ದರೆ ಅಥವಾ ಕಡಿಮೆ ಅಂಕಗಳು ಬಂದಿದ್ದರೆ ಎರಡನೇ ಪರೀಕ್ಷೆ ಬರೆಯಬಹುದು. ಎರಡನೇ ಪರೀಕ್ಷೆಯ ಫಲಿತಾಂಶದಲ್ಲೂ ಸಮಾಧಾನ ಇಲ್ಲದಿದ್ದರೆ ಮೂರನೇ ಪರೀಕ್ಷೆ ಬರೆಯಬಹುದು. ಈ ರೀತಿ ಮೂರೂ ಪರೀಕ್ಷೆ ಬರೆದರೂ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಅಥವಾ ಮೂರೂ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದಿರುವ ಬೇರೆ ಬೇರೆ ವಿಷಯಗಳ ಫಲಿತಾಂಶಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಪರಿಗಣಿಸಬಹುದಾಗಿದೆ.

 



ನವ ದೆಹಲಿ: “ರಿಕಾಲಿಂಗ್ ಅಮರ ಸುಳ್ಯ” ಖ್ಯಾತಿಯ ಯುವ ಲೇಖಕ ಅನಿಂದಿತ್ ಗೌಡ, ನವ ದೆಹಲಿಯಲ್ಲಿನ ಬಿ.ಜೆ.ಪಿ. ಕೇಂದ್ರ ಕಾರ್ಯಾಲಯದ ಗ್ರಂಥಾಲಯಕ್ಕೆ ಕೃತಿಯ ಗೌರವ ಪ್ರತಿಯನ್ನು ಹಸ್ತಾಂತರಿಸಿದರು. 


ಬಿ.ಜೆ.ಪಿ. ರಾಷ್ಟ್ರೀಯ ಸಂಯೋಜಕರು (ದಾಖಲಾತಿ ಮತ್ತು ಗ್ರಂಥಾಲಯ ವಿಭಾಗ) ಡಾ. ಅಸೀರ್ವಥಂ ಅಚಾರಿ, Ph.D ಗೌರವ ಪ್ರತಿಯನ್ನು ಗ್ರಂಥಾಲಯ ಸಂಗ್ರಹಕ್ಕೆ ಸ್ವೀಕರಿಸಿದರು. 


ಈ ಸಂದರ್ಭದಲ್ಲಿ ಗ್ರಂಥಪಾಲಕಿ ಪಾರ್ವತಿ ಹಾಗೂ ಸಹಯೋಗಿ ಸಂಜೀವ್ ಕುಮಾರ್ ಉಪಸ್ಥಿತರಿದ್ದರು.


ಆರಂಭಿಕ ಸ್ವಾತಂತ್ರ್ಯ ಹೋರಾಟ ಹಾಗೂ ಅನೇಕ ಅಸಾಧಾರಣ ವೀರರ ತ್ಯಾಗದ ದಾಖಲಾಧಾರಿತ ಪ್ರಸ್ತುತಿಗೆ ಗೌರವಪೂರ್ಣ ಪರಿಗಣನೆ ದೊರಕುತ್ತಿರುವುದು ಹೆಮ್ಮೆಯ ವಿಚಾರ ಎಂದು ಲೇಖಕರು ಮಾಧ್ಯಮಕ್ಕೆ ತಿಳಿಸುವುದರೊಂದಿಗೆ, ಗೌರವ ಪ್ರತಿಯ ಒಳಾಂಗಣದಲ್ಲಿ ರಾಷ್ಟ್ರದ ಧೀರ ಭೂತಕಾಲವನ್ನು ಗೌರವಿಸುವುದು, ರಾಷ್ಟ್ರೀಯ ಸಮಗ್ರತೆಯನ್ನು ಎತ್ತಿಹಿಡಿಯುವುದು ಮತ್ತು ಶ್ರೀಮಂತ ಪರಂಪರೆಯನ್ನು ಉಳಿಸಿಕೊಳ್ಳುವ ಬದ್ಧತೆಯ ಬಗ್ಗೆ ಓದುಗರನ್ನು ಪ್ರೇರೇಪಿಸುವ ವಿಶೇಷ ಸಂದೇಶವನ್ನು ಬರೆದಿರುವುದಾಗಿ ಲೇಖಕರು ತಿಳಿಸಿದ್ದಾರೆ.

 



ಮಲ್ಪೆ -ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಆಗುಂಬೆ ಘಾಟಿ ಯಲ್ಲಿ ಸುರಂಗ ಯೋಜನೆ ಗೆ ಎನ್ ಹೆಚ್ ಎಐ ಒಪ್ಪಿಗೆ ನೀಡಿದೆ.ಯೋಜನೆಯ ಸಾಧಕ ಬಾಧಕ ಅರಿಯಲು ಡಿಪಿಆರ್ ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ಒಪ್ಪಿಗೆ ನೀಡಿದ್ದು 2 ಕೋಟಿ ರೂ ವೆಚ್ಚದಲ್ಲಿ ಡಿಪಿಆರ್ ಸಿದ್ದವಾಗಲಿದೆ.ಉಡುಪಿ ಜಿಲ್ಲೆ ಹೆಬ್ರಿ,ಸೋಮೇಶ್ವರ ದಿಂದ ತೀರ್ಥಹಳ್ಳಿ ತಾಲೂಕಿನ ಮೆಗರಹಳ್ಳಿ ಸಂಪರ್ಕಿಸುವ 12 ಕಿಮೀ ದೂರಕ್ಕೆ 3,500 ಕೋಟಿ ವೆಚ್ಚವಾಗಲಿದ್ದು, ಆಗುಂಬೆ ಘಾಟಿ ಯಲ್ಲಿ ಸುರಂಗ ಮಾರ್ಗ ಕ್ಕೆ ಸೂಚಿಸಲಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

 



ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ, ಸಾಹಿತಿ, ನಿವೃತ್ತ ಉಪನ್ಯಾಸಕ  ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ನಿನ್ನೆ ರಾತ್ರಿ ನಿಧನರಾಗಿದ್ದಾರೆ.


ಜಾನಪದ ಜಗತ್ತಿನ ಮಾಹಿತಿಯನ್ನು ಸಂಶೋಧನೆ ಮತ್ತು ಬರಹಗಳ ಮೂಲಕ ನಾಡಿನ ಮನೆ ಮನೆಗೆ ಬಿತ್ತರಿಸಿದ ಪಾಲ್ತಾಡಿಯವರು ವಿವಿಧ ಜಾನಪದ ಸಂಘಟನೆಗಳ ಮೂಲಕ ಆಚರಣೆಗಳನ್ನು ಕೆಡ್ಡಸ, ಬಿಸು, ಆಟಿ  ಆಚರಣೆಗಳ ಮಹತ್ವವನ್ನು ಸಮಾಜಕ್ಕೆ ತಲುಪಿಸಿದವರು.


ಭೂತಾರಾಧನೆ, ಜನಪದ ಕುಣಿತಗಳ ಕುರಿತು ಆಳವಾದ ಮಾಹಿತಿ ಮತ್ತು ಅವರು ಹಲವು ಮಂದಿಗೆ ಡಾಕ್ಟರೇಟ್ ಸಹಿತ ಹಲವು ಪದವಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ


ಪತ್ನಿ ಸುಮಾ ಆರ್. ಆಚಾರ್, ಪುತ್ರಿಯರಾದ ಕಿರಣ ಪಿ.ಆರ್, ಸುಪ್ರಿಯ ಪಿ.ಆರ್, ಪುತ್ರ ಹರ್ಷವರ್ಧನ ಪಿ.ಆರ್ ಹಾಗೂ ಅಳಿಯ ಕೃಷ್ಣ ಎಂ.ವಿ, ಜಯಪಾಲ್ ಎಚ್.ಆರ್. ಸೊಸೆ ಸುಧಾ ಟಿ.ಜೆ ಹಾಗೂ ಮೊಮ್ಮಕ್ಕಳು ಸುಹೃತ್, ಸಹಜ, ನಿಸ್ವನ, ಅವಲೋಕಿತ, ನಲ್ಮೆ, ಆತ್ಮೀಯ ಅವರನ್ನು  ಅಗಲಿದ್ದಾರೆ.


ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಅವರ ಮನೆಯಾದ ಪುತ್ತೂರು ತಾಲ್ಲೂಕಿನ ಪಾಲ್ತಾಡಿ ಗ್ರಾಮದ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 



ಬೆಂಗಳೂರು: ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ‘108’ ಆಯಂಬುಲೆನ್ಸ್‌ ಸಿಬ್ಬಂದಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ರಾಜ್ಯವ್ಯಾಪಿ ಮುಷ್ಕರದ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ.


ಆರೋಗ್ಯ ಇಲಾಖೆ ಆಯುಕ್ತ ಡಾ. ರಣದೀಪ್‌ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ಭಾಗವಹಿಸಿದ 108 ಸಿಬ್ಬಂದಿ, ತಮ್ಮ ಸಮಸ್ಯೆಯನ್ನು ಸರಕಾರಕ್ಕೆ ವಿವರಿಸಿ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಆಯುಕ್ತರು, ಇಲಾಖೆಯಿಂದ ಯಾವುದೇ ವೇತನ ಬಾಕಿ ಇಲ್ಲ. ಸಿಬ್ಬಂದಿ ವೇತನ ಪಾವತಿ ಮಾಡಬೇಕಿರುವ ಜಿವಿಕೆ ಇಎಂಆರ್‌ ಸಂಸ್ಥೆಯಿಂದ ಸಮಸ್ಯೆಗಳಾಗಿದ್ದರೆ, ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳಬೇಕು. ಇದಕ್ಕೆ ಸರಕಾರ ಸಹಕಾರ ಕೊಡಲಿದೆ ಎಂದು ಹೇಳಿದರು.

ಈ ಸಂಬಂಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸರಕಾರದಿಂದ ಯಾವುದೇ ವೇತನ ಬಾಕಿ ಇಲ್ಲ. ಸಂಸ್ಥೆ ಜತೆಗೆ ಒಡಂಬಡಿಕೆಯ ಪ್ರಕಾರ ಸರಕಾರದಿಂದ ಕೊಡಬೇಕಾದ ಅನುದಾನವನ್ನು ಪಾವತಿಸಲಾಗಿದೆ. ಯೋಜನೆ ನಿರ್ವಹಿಸುತ್ತಿರುವ ಜಿವಿಕೆ ಇಎಂಆರ್‌ ಸಂಸ್ಥೆ ವೇತನ ಬಾಕಿಯಿರಿಸಿದೆ ಪ್ರತ್ಯೇಕ ಪ್ರಕಟನೆ ಹೊರಡಿಸಿದ್ದಾರೆ.

ಆರೋಗ್ಯ ಇಲಾಖೆ ವಲಯವಾರು ವೇತನ ಪಾವತಿಯನ್ನು ತಡೆಹಿಡಿದು, ರಾಜ್ಯಾದ್ಯಂತ ಏಕ ರೂಪದ ವೇತನ ಪಾವತಿಸುವಂತೆ ಜಿವಿಕೆ ಇಎಂಆರ್‌ ಸಂಸ್ಥೆಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಬಾಕಿ ಹಾಗೂ ಕಡಿತಗೊಂಡ ವೇತನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಆಯಂಬುಲೆನ್ಸ್‌ ನೌಕರ ಸಂಘದ ಉಪಾಧ್ಯಕ್ಷ ಪರಮ ಶಿವಯ್ಯ ಹೇಳಿದರು.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget