ಸುಳ್ಯ:ದಕ್ಷಿಣಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ ನಡೆಸಿದರು. ಕಡಬ ತಾಲೂಕಿನ ಅಲಂತಾಯ ಶಾಲೆ ಭೇಟಿ ನೀಡಿ,

ನೆಲ್ಯಾಡಿ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟಿಸಿದರು ನಂತರ ಕಡಬ ತಾಲೂಕು ಕಚೇರಿಯಲ್ಲಿ ಜಂಟಿ ಸರ್ವೆ ಬಗ್ಗೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ದಾರೆ.

ಕಡಬ, ಎಡಮಂಗಲ ಕಾರ್ಯಕರ್ತರ ಜೊತೆ ಸಭೆ ಹಿರಿಯ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು.ನಿಂತಿಕಲ್ಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಪಂಜ,ಬಿಳಿನೆಲೆ ಯಲ್ಲಿ ಕಾರ್ಯಕರ್ತರ ಭೇಟಿಯಾದರು.

ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಹರೀಶ್ ಕಂಜಿಪಿಲಿ, ವಿನಯ್ ಕುಮಾರ್ ಕಂದಡ್ಕ,

ಕಿಶೋರ್ ಶಿರಾಡಿ,ಸುಬೋದ್ ಶೆಟ್ಟಿ ,ಪ್ರದೀಪ್ ರೈ,ಅನೂಪ್ ಬಿಳಿಮಲೆ, ಸ್ಥಳೀಯ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.














































