ಕಡಬ:ಬಿಜೆಪಿ ಬಿಳಿನೆಲೆ ನೂತನ ಕಚೇರಿ ಉದ್ಘಾಟನೆ ಮತ್ತು ಕಾರ್ಗಿಲ್ ವಿಜಯ್ ದಿವಸ ಹಾಗೂ ವೀರ ಯೋಧರಿಗೆ ಅಭಿನಂದನಾ ಕಾರ್ಯಕ್ರಮ ವಿದ್ಯಾ ಸಭಾಂಗಣ ಬಿಳಿನೆಲೆ ಯಲ್ಲಿ ಜರಗಿತು.ಶಾಸಕಿ ಭಾಗೀರಥಿ ಮುರುಳ್ಯ ಕಚೇರಿ ಉದ್ಘಾಟಿಸಿದರು,ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್ ಅಂಗಾರ ಉಪಸ್ಥಿತರಿದ್ದರು.

ಸೈನಿಕರಿಗೆ ಅಭಿನಂದನಾ ಕಾರ್ಯಕ್ರಮ ಸಭಾ ಅಧ್ಯಕ್ಷತೆಯನ್ನು ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ವಹಿಸಿದ್ದರು, ಮುಖ್ಯ ಭಾಷಣಕಾರರಾಗಿ ಜಿಲ್ಲಾ ಬಿಜೆಪಿ ಪ್ರಕೋಷ್ಠ ಸಹ ಸಂಚಾಲಕ ಪ್ರಸನ್ನ ದರ್ಬೆ ಮಾತನಾಡಿ ” ಕಾರ್ಗಿಲ್ ಸಮರದಲ್ಲಿ ದೇಶದ ಸೈನಿಕರ ತಾಕತ್ ಜಗತ್ತಿಗೆ ತೆರೆದಿಡುವ ಕೆಲಸವಾಗಿತ್ತು ಆಗಿನ ಪ್ರಧಾನಿ ವಾಜಪೇಯಿ ನೇರ ಯುದ್ಧ ರಂಗಕ್ಕೆ ತೆರಳಿ ಸೈನಿಕರಿಗೆ ಆತ್ಮ ಸ್ಥೆರ್ಯ ತುಂಬುವ ಕೆಲಸ ಮಾಡಿದ್ದನ್ನು ನೆನಪಿಸಿಕೊಳ್ಳಬೇಕಾಗಿದೆ.

ಇಡೀ ದೇಶವೇ ಒಗ್ಗಟ್ಟಾಗಿ ಈ ಯುದ್ಧವನ್ನು ಎದುರಿಸಿದ್ದು ಆನೇಕ ಯೋಧರ ತ್ಯಾಗ,ಬಲಿದಾನ ದಿಂದ ಯುದ್ಧದಲ್ಲಿ ಗೆದ್ದುಕೊಂಡೆವು ಅದಲ್ಲದೆ ಹುತಾತ್ಮ ಯೋಧರ ನೆನಪಿಗಾಗಿ ಸ್ಮಾರಕ ನಿರ್ಮಾಣ ಪ್ರಸ್ತುತ ಬಿಜೆಪಿ ಸರ್ಕಾರ 4600 ಕಿಮೀ ಗಡಿಯಲ್ಲಿ ಹೆದ್ದಾರಿ ನಿರ್ಮಾಣ,ವೈಬ್ರೇಂಟ್ ಯೋಜನೆ,ಶಸ್ತ್ರಸ್ತ್ರ ಪೂರೈಕೆಯಲ್ಲಿ ನಿರ್ಭರತೆ ಹೀಗೆ ಸೈನಿಕರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ ಒತ್ತು ನೀಡಿದೆಯೆಂದು ಪ್ರಸನ್ನ ದರ್ಬೆ ಭಾಷಣದಲ್ಲಿ ಉಲ್ಲೇಖಸಿದರು.ಈ ವೇಳೆ ಸುಬ್ರಮಣ್ಯ ಎಜ್ಯುಕೇಶನ್ ಸೊಸೈಟಿ ಯ ಕೃಷ್ಣ ಶರ್ಮ,

ಬಿಜೆಪಿ ಸುಬ್ರಮಣ್ಯ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಮಧುಸೂದನ್ ಕೊಂಬಾರು,ಬಿಳಿನೆಲೆ ಶಕ್ತಿ ಕೇಂದ್ರ ಅಧ್ಯಕ್ಷ ಸತೀಶ್ ಎರ್ಕ,ಬೂತ್ ಸಮಿತಿ ಅಧ್ಯಕ್ಷ ಕಿರಣ್ ಮದೆಪೆರ್ಲ ಉಪಸ್ಥಿತರಿದ್ದರು ಈ ವೇಳೆ ನಿವೃತ್ತ ಸೈನಿಕರಿಗೆ ಗೌರವರ್ಪಣೆ,ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ನಡೆಯಿತು,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು









































