ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರಿಗಾಗಿ ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘವು ಕಳೆದ ಹಲವು ವರ್ಷಗಳಿಂದ 10 ಸೆಂಟ್ಸ್ ಜಾಗ ಮಂಜೂರಾತಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆಯೆಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಸದ ಕ್ಯಾ ಬ್ರಿಜೇಶ್ ಚೌಟ ತಿಳಿಸಿದ್ದಾರೆ ಸಂಸದನಾಗಿ ಮಾತ್ರವಲ್ಲದೆ, ಒಬ್ಬ ಯೋಧನಾಗಿಯೂ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ ಸೈನಿಕರ ತ್ಯಾಗ ಮತ್ತು ಕಷ್ಟದ ಸ್ಪಷ್ಟ ಅರಿವು ನನಗಿದೆ. ದೇಶದ ಗಡಿಯಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಯೋಧರ ಈ ಬೇಡಿಕೆ ನೂರಕ್ಕೆ ನೂರರಷ್ಟು ನ್ಯಾಯಯುತವಾದದ್ದು. ಈ ವಿಷಯವಾಗಿ ನಾನು ಖುದ್ದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳ ಜತೆ ಮತ್ತೊಮ್ಮೆ ಮಾತನಾಡಿ, ಜಾಗ ಮಂಜೂರಾತಿ ಪ್ರಕ್ರಿಯೆ ವಿಳಂಬವಾಗಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ.ಈ ವಿಚಾರವಾಗಿ ನಾನು 6 ತಿಂಗಳ ಮುಂಚೆ ಖುದ್ದಾಗಿ ವಿಚಾರಿಸಿ, ಫಾಲೋಆಪ್ ಮಾಡಿದ ಕಾರಣ ಕಡತವು ಪುತ್ತೂರು ಎಸಿ ಕಚೇರಿಗೆ ಬಂದು ಅಲ್ಲಿಂದ ಅದು ತಹಸೀಲ್ದಾರರ ಬಳಿಗೆ ಹೋಗಿತ್ತು. ಕಡತವು ನಂತರ ಜಿಲ್ಲಾಧಿಕಾರಿಗೆ ಬಂದು ಸರ್ಕಾರದ ಮಟ್ಟದಲ್ಲಿ ಸೂಕ್ತ ಮಂಜೂರಾತಿ ದೊರೆಯಬೇಕಿದೆ. ಮಾತೃಭೂಮಿಯ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ ಗೌರವಾನ್ವಿತ ಯೋಧರನ್ನು ಆಡಳಿತಾತ್ಮಕ ವಿಳಂಬದಿಂದಾಗಿ ಹೀಗೆ ಕಾಯಿಸುವುದು ಅತ್ಯಂತ ವಿಷಾದನೀಯ. ಆದ್ದರಿಂದ ರಾಜ್ಯ ಸರ್ಕಾರವು ವಿಳಂಬ ಧೋರಣೆ ತೋರದೆ, ತಕ್ಷಣವೇ ಸ್ಪಂದಿಸಿ ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘಕ್ಕೆ ಜಾಗವನ್ನು ಹಸ್ತಾಂತರಿಸಲು ಅಧಿಕೃತ ಆದೇಶ ಹೊರಡಿಸಬೇಕು ಎಂದು ನನ್ನ ಆಗ್ರಹವೂ ಆಗಿದೆ. ಅಲ್ಲದೇ ನಮ್ಮ ಯೋಧರ ಹಕ್ಕಿಗಾಗಿ ಮತ್ತು ಅವರ ಗೌರವಕ್ಕಾಗಿ ನಾನು ಸದಾ ಅವರ ಜೊತೆಗಿದ್ದೇನೆ.
ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘಕ್ಕೆ ಜಾಗ ಮಂಜೂರಾತಿ ವಿಳಂಬ ವಿಚಾರ | ತಕ್ಷಣ ಜಾಗ ಹಸ್ತಾಂತರಿಸಲು ಅಧಿಕೃತ ಅದೇಶ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ಕ್ಯಾ ಚೌಟ ಒತ್ತಾಯ
Savistara
Bureau Report
[t4b-ticker]









































