ವಿಶ್ವ ಹಿಂದೂ ಪರಿಷತ್ ಜಾಲಿ ಘಟಕ ಮತ್ತು ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್,ಜಾಲಿ ಆಶ್ರಯದಲ್ಲಿ ಗ್ರಾಮದ ಪ್ರತಿಯೊಬ್ಬರಿಗೂ ಭಗವದ್ಗೀತೆಯ ಸಾರ ತಿಳಿಸುವ ಉದ್ದೇಶದಿಂದ ಇಸ್ಕಾನ್ ಸಂಸ್ಥೆಯ ಪ್ರಸಿದ್ಧ ಭಗವದ್ಗೀತಾ ಪ್ರವಚನಕಾರರಾದ ಮುರಾರಿ ಗೋಪ್ರಾಜ್ ದಾಸ್ ಅವರಿಂದ ಗೀತಾ ಸಂದೇಶ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 200ಕ್ಕೂ ಹೆಚ್ಚು ಕೃಷ್ಣ ಭಕ್ತರು ಸತ್ಸಂಗದಲ್ಲಿ ಭಾಗವಹಿಸಿ ಭಕ್ತಿಭಾವಪೂರ್ಣವಾಗಿ ನಾಮ ಜಪ ಮಾಡಿ ಧ್ಯಾನದಲ್ಲಿ ಭಾಗವಹಿಸಿದ್ದರು.25 ಪುಟಾಣಿಗಳಿಗೆ ಭಗವದ್ಗೀತೆ ಪ್ರತಿಯನ್ನು ಕೊಡಲಾಯಿತು.













































