ನಿತೀಶ್ ಕುಮಾರ್ ಅವರನ್ನು ಎದುರಿಸುವುದಾಗಿ ಜತೆಯಾಗಿ ಪ್ರತಿಜ್ಞೆ
ಪಾಟ್ನಾ: ಮಾಜಿ ಕೇಂದ್ರ ಸಚಿವ ಆರ್ಸಿಪಿ ಸಿಂಗ್ ಅವರು ಆಪ್ ಸಬಿ ಆವಾಜ್ ಪಕ್ಷವನ್ನು ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದೊಂದಿಗೆ ವಿಲೀನ ಮಾಡಿದ್ದಾರೆ.ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್ ಮತ್ತು ಆರ್ಸಿಪಿ ಸಿಂಗ್ ಕೈಜೋಡಿಸಿ, ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಾಜಿ ಮಾರ್ಗದರ್ಶಕರನ್ನು ಎದುರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ, ಮಾಜಿ ಕೇಂದ್ರ ಸಚಿವ ಸಿಂಗ್, ಕೇವಲ ಆರು ತಿಂಗಳ ಹಿಂದೆ ಹುಟ್ಟಿಕೊಂಡ ತಮ್ಮ ಆಪ್ ಸಬಿ ಆವಾಜ್ ಪಕ್ಷವನ್ನು ಕಿಶೋರ್ ಅವರ ಜನ್ ಸುರಾಜ್ ಪಕ್ಷದೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದ್ದಾರೆ.ಕಿಶೋರ್ ಮತ್ತು ಸಿಂಗ್ ಇಬ್ಬರೂ ಜೆಡಿ (ಯು) ನಲ್ಲಿ ಜತೆಯಾಗಿ ಕೆಲಸ ಮಾಡಿದ್ದರು. ಮಾಜಿ ರಾಜಕೀಯ ತಂತ್ರಜ್ಞರಾಗಿದ್ದ ಕಿಶೋರ್,ಜೆಡಿ(ಯು) ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು, 2020 ರಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು.
ಬಿಹಾರ ಸಿಎಂ ಅವರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಅಧಿಕಾರಿ ಸಿಂಗ್, ಪಕ್ಷದಲ್ಲಿ ಪ್ರಮುಖ ಸಾಂಸ್ಥಿಕ ಹುದ್ದೆಗಳನ್ನು ಹೊಂದಿದ್ದರು ಮತ್ತು ಅಲ್ಪಾವಧಿಗೆ ಅದರ ನೇತೃತ್ವವನ್ನೂ ವಹಿಸಿದ್ದರು. 2022 ರಲ್ಲಿ ನಿತೀಶ್ ಸಿಂಗ್ ಪರವಾಗಿ ನಿಲ್ಲದಾಗ ರಾಜೀನಾಮೆ ನೀಡಬೇಕಾಯಿತು, ಅವರು ಅನುಮೋದನೆ ಪಡೆಯದೆ ಕೇಂದ್ರ ಸಚಿವ ಸಂಪುಟದ ಸ್ಥಾನವನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿತ್ತು. ಜೆಡಿ(ಯು) ತೊರೆದ ನಂತರ ಸಿಂಗ್ 2023 ರಲ್ಲಿ ಬಿಜೆಪಿಯನ್ನೂ ಸೇರಿದ್ದರು.












































