ಲಕ್ಷ್ಮೀ: ಕ್ರಿಕೆಟಿಗರು ರಾಜಕಾರಣಿಗಳನ್ನು ಭೇಟಿ ಆದರೆ ಅಲ್ಲಿ ರಾಜಕೀಯ ಎಂಟ್ರಿಯ ಬಗ್ಗೆ ಚರ್ಚೆ ಶುರುವಾಗುವುದು ಸಹಜ. ಭಾರತೀಯ ಕ್ರಿಕೆಟಿಗರೊಬ್ಬರು ಉತ್ತರ ಪ್ರದೇಶದ ಸಿಎಂ ಅವರನ್ನು ಭೇಟಿ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರು ಉತ್ತರ ಪ್ರದೇಶದ ಸಿ ಎಂ ಯೋಗಿ ಆದಿತ್ಯನಾಥ (Yogi Adityanath) ಅವರನ್ನು ಭೇಟಿ ಆಗಿದ್ದಾರೆ.ಸೋಮವಾರ (ಮೇ.19) ಲಕ್ಕೋದಲ್ಲಿರುವ ಯೋಗಿ ಆದಿತ್ಯನಾಥ್ ಅವರ ನಿವಾಸದಲ್ಲಿ ಶಮಿ ಭೇಟಿ ಆಗಿದ್ದಾರೆ. ಶಮಿ ಅವರನ್ನು ಯೋಗಿ ಅವರು ಆತ್ಮೀಯವಾಗಿ ಹೂಗುಚ್ಛ ನೀಡಿ ಸ್ವಾಗತಿಸಿದ್ದು, ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ.
ಶಮಿ ಅವರ ಭೇಟಿಯ ಸುತ್ತ ನಾನಾ ರೀತಿಯ ಚರ್ಚೆ ಶುರುವಾಗಿದೆ. ಅವರು ರಾಜಕೀಯಕ್ಕೆ ಬರುತ್ತಾರೆ. ಬಿಜೆಪಿಗೆ ಸೇರುತ್ತಾರೆ ಎನ್ನುವ ಕುರಿತು ಚರ್ಚೆ ಶುರುವಾಗಿದೆ.ಬಿಜೆಪಿ ಮೊದಲಿನಿಂದಲೇ ಖ್ಯಾತನಾಮರನ್ನು ಪಕ್ಷಕ್ಕೆ ಸೇರಿಸಿಕೊಂಡ ಉದಾಹರಣೆಯಿದೆ. ಶಮಿ ಅವರ ಭೇಟಿಯೂ ರಾಜಕೀಯವಾಗಿ ಚರ್ಚೆ ಆಗುತ್ತಿದೆ.ರಾಜಕೀಯ ವ್ಯಕ್ತಿಗಳ ಜತೆ ಶಮಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕಾಣಿಸಿಕೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಶಮಿ ಕಾಣಿಸಿಕೊಂಡಿದ್ದರು.ಸದ್ಯ ಶಮಿ – ಯೋಗಿ ಭೇಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.












































