ಅಮೃತ ಭಾರತ ರೈಲ್ವೆ ಸ್ಟೇಶನ್ ಯೋಜನೆಯಡಿ ನೈಋುತ್ಯ ರೈಲ್ವೆ ವಿಭಾಗದ ಗದಗ, ಧಾರವಾಡ, ಬಾಗಲಕೋಟೆ, ಗೋಕಾಕ ಮತ್ತು ಮುನಿರಾಬಾದ್ ರೈಲ್ವೆ ನಿಲ್ದಾಣಗಳು ಮೇ 22 ರಂದು ಲೋಕಾರ್ಪಣೆಗೊಳ್ಳಲಿವೆ. ಒಟ್ಟು 1275 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ, ಮೊದಲ ಹಂತವಾಗಿ 5 ನಿಲ್ದಾಣಗಳು ನವೀಕರಣಗೊಂಡಿವೆ. ಈ ನಿಲ್ದಾಣಗಳು ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸವನ್ನು ಹೊಂದಿದ್ದು, ಸೋಲಾರ್ ವಿದ್ಯುತ್ ಘಟಕಗಳನ್ನು ಒಳಗೊಂಡಿವೆ.
ಗದಗ: ಅಮೃತ ಭಾರತ ರೈಲ್ವೆ ಸ್ಟೇಶನ್ ಯೋಜನೆಯಡಿ ಮೇಲ್ದರ್ಜೆಗೇರಿದ ನೈಋುತ್ಯ ರೈಲ್ವೆ ವಿಭಾಗದ ಗದಗ, ಧಾರವಾಡ, ಬಾಗಲಕೋಟ, ಗೋಕಾಕ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ರೈಲ್ವೆ ನಿಲ್ದಾಣಗಳು ಇದೇ ಮೇ 22ರಂದು ಜನಸೇವೆಗೆ ಮುಕ್ತವಾಗಲಿದೆ.
ದೇಶಾದ್ಯಂತ ಒಟ್ಟು 1275 ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ರೈಲ್ವೆ ಸ್ಟೇಷನ್ ಯೋಜನೆಯಡಿ ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 500 ರೈಲ್ವೆ ನಿಲ್ದಾಣಗಳ ನವೀಕರಣ ಕಾಮಗಾರಿ ಆರಂಭವಾಗಿದ್ದು, ಸದ್ಯ ಕಾಮಗಾರಿ ಪೂರ್ಣಗೊಂಡ ನೈರುತ್ಯ ರೈಲ್ವೆ ವಲಯದ 5 ರೈಲ್ವೆ ನಿಲ್ದಾಣಗಳು ಸೇರಿದಂತೆ ದೇಶದ 103 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ, ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಈ ರೈಲ್ವೆ ಸ್ಟೇಶನ್ ಕಟ್ಟಡಗಳ ವಿನ್ಯಾಸವೂ ಆಯಾ ಪ್ರದೇಶದ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿದ್ದು, ಪ್ರತಿ ನಿಲ್ದಾಣವೂ ಸೋಲಾರ್ ವಿದ್ಯುತ್ ಘಟಕ ಹೊಂದಿವೆ.
ಗದಗ ನಿಲ್ದಾಣ
ಜಿ+1 ಮಾದರಿ ಕಟ್ಟಡ ಹೊಂದಿದ್ದು, ಪ್ಲಾಟ್ಫಾರ್ಮ್ ನಂ. 2 ರಲ್ಲಿಎಸ್ಕಲೇಟರ್ ಮತ್ತು ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಹೊರ ಆವರಣದಲ್ಲಿ ಬಸ್ ಬೇ, ಆಟೊ ಬೇ, ಪಾಕಿಂರ್ಗ್ ಏರಿಯಾ, ಸ್ಟೇಷನ್ ಮ್ಯಾನೇಜರ್ ಕೊಠಡಿ, ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಮುನಿರಾಬಾದ್ ಸ್ಟೇಷನ್
ಜಿ+1 ಕಟ್ಟಡ, , ಪ್ಲಾಟ್ಫಾರ್ಮ್ 1 ಮತ್ತು 2 ರಲ್ಲಿ ಹೊಸ , ಪ್ಲಾಟ್ಫಾರ್ಮ್, 2 ಲಿಫ್ಟ್ಗಳನ್ನು ಒದಗಿಸಲಾಗಿದೆ. ಕೋಚ್ ಮಾರ್ಗದರ್ಶನ ಪ್ರದರ್ಶನ ಫಲಕಗಳು, ಪ್ರಯಾಣಿಕರ ಅನೌನ್ಸಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ.
ಗೋಕಾಕ್ ರಸ್ತೆ ನಿಲ್ದಾಣ
ಹೊಸ ಜಿ+1 ಕಟ್ಟಡ,, ಪ್ಲಾಟ್ಫಾರ್ಮ್ 1 ಮತ್ತು 2 ರಲ್ಲಿ ಹೊಸ ಚಾವಣಿಗಳ ನಿರ್ಮಾಣ, 2 ಲಿಫ್ಟ್ಗಳನ್ನು ಒದಗಿಸಲಾಗಿದೆ, ಪ್ರವಾಸಿಗರ ಅನುಕೂಲಕ್ಕಾಗಿ ನಿಲ್ದಾಣದ ಒಳಗೆ ಪ್ರವಾಸಿ ನಕ್ಷೆ, ಮುಖ್ಯ ಕಟ್ಟಡಕ್ಕೆ ಬಹು ಥೀಮ್ ಲೈಟ್ಗಳನ್ನು ಅಳವಡಿಸಲಾಗಿದೆ.
ಧಾರವಾಡ:
ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಎರಡನೇ ಪ್ರವೇಶ ಕಲ್ಪಿಸಲಾಗಿದೆ. , ಪ್ಲಾಟ್ಫಾರ್ಮ್ 1, 2/3 ಮತ್ತು 4ರಲ್ಲಿ ಲಿಫ್ಟ್ , , ಪ್ಲಾಟ್ಫಾರ್ಮ್ 1 ರಲ್ಲಿ 2 ಎಸ್ಕಲೇಟರ್, ಆಕರ್ಷಕ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗಿದೆ.
ಬಾಗಲಕೋಟೆ:
ಹೊಸ ಜಿ+1 ಕಟ್ಟಡ, , ಪ್ಲಾಟ್ಫಾರ್ಮ್ 1, 2 ಮತ್ತು 3 ರಲ್ಲಿ ಹೊಸ ಮೇಲ್ಛಾವಣಿಗಳು, ಲಿಫ್ಟ್ , ಎಸ್ಕಲೇಟರ್ಗಳನ್ನು ಅಳಡಿಸಲಾಗಿದೆ.
ಅಮೃತ ಭಾರತ್ ಯೋಜನೆಯಡಿ ಅಭಿವೃದ್ಧಿಯಾದ ನಿಲ್ದಾಣಗಳು
ನಿಲ್ದಾಣ ವೆಚ್ಚ (ಕೋಟಿ ರೂ.ಗಳಲ್ಲಿ)
ಗೋಕಾಕ 16.98
ಧಾರವಾಡ 17.1
ಮುನಿರಾಬಾದ 18.4
ಗದಗ 23.24
ಬಾಗಲಕೋಟ 16.06
ಅಮೃತ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ ನೈರುತ್ಯ ರೈಲ್ವೆ ವಲಯದ 5 ನಿಲ್ದಾಣಗಳು ನವೀಕರಣಗೊಂಡಿದ್ದು, ಮೇ 22ರಂದು ಲೋಕಾರ್ಪಣೆಗೆ ಸಿದ್ಧವಾಗಿವೆ ಎಂದಿದ್ದಾರೆ ಡಾ. ಮಂಜುನಾಥ ಕನಮಡಿ, ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರ, ನೈರುತ್ಯ ರೈಲ್ವೆ ವಲಯ, ಹುಬ್ಬಳ್ಳಿ.












































