ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ; ಮಣಿಪಾಲದ ರಸ್ತೆ ಮಧ್ಯೆ ಕಲ್ಲುಗಳ ರಾಶಿ

Picture of Savistara

Savistara

Bureau Report

ಉಡುಪಿ: ಜಿಲ್ಲೆಯಾದ್ಯಂತ ಮಂಗಳವಾರ (ಮೇ.20) ಸುರಿದ ಭಾರಿ ಮಳೆಗೆ ನಗರದ ವಿವಿಧೆಡೆ ಕೃತಕ ನೆರೆ ಉಂಟಾಗಿದೆ.ಧಾರಾಕಾರ ಮಳೆಯಿಂದಾಗಿ ಉಡುಪಿಯ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತ ಉಂಟಾಗಿದೆ.ಸಗ್ರಿಯಲ್ಲಿ ತೋಡು ಕುಸಿತ, ದೊಡ್ಡಣಗುಡ್ಡೆಯಲ್ಲಿ ಮರ ಬಿದ್ದ ಪರಿಣಾಮ ವಿವಿಧೆಡೆ ಸಂಚಾರದಲ್ಲಿ ವ್ಯತ್ಯಯ ಕಂಡು ಬಂತು.

ಮಣಿಪಾಲದಲ್ಲಿ ಕಿತ್ತು ಬಂದ ತೋಡು:

ಮಣಿಪಾಲದ ಐನಾಕ್ಸ್ ಬಳಿ ತೋಡು ಕಿತ್ತುಹೋದ ಪರಿಣಾಮ ಕಲ್ಲುಗಳು ರಸ್ತೆಗೆ ಬಂದಿದ್ದು, ಹಲವು ಹೊತ್ತು ವಾಹನ ದಟ್ಟನೆ ಕಂಡುಬಂತು. ಅನಂತರ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಲಾಯಿತು. ಜೆಸಿಬಿ ಮೂಲಕ ರಸ್ತೆ ಮಧ್ಯೆ ಬಿದ್ದಿರುವ ಕಲ್ಲುಗಳನ್ನು ತೆರವುಗೊಳಿಸಲಾಗಿದೆ.

ನೀರು ನುಗ್ಗಿದ ಪರಿಣಾಮ ಕೆಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ.

ಮಣಿಪಾಲದ ಮಳೆಯ ಪ್ರದೇಶಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

[t4b-ticker]
error: Content is protected !!