ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಂಪರ್ಕ ಕ್ರಾಂತಿ ಹೊಸ ಅಧ್ಯಾಯ ಪ್ರಾರಂಭ |ಸಂಸದ ಬಿವೈ ರಾಘವೇಂಧ್ರ ರ ಪ್ರಯತ್ನದಿಂದ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆ ಅನುಷ್ಠಾನಕ್ಕೆ ಚಾಲನೆ

Picture of Savistara

Savistara

Bureau Report

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಪರ್ಕ ಕ್ರಾಂತಿಯ ಹೊಸ ಅಧ್ಯಾಯ ಆರಂಭವಾಗಿದೆ ಸಿಗಂದೂರು ಸೇತುವೆ ಲೋಕಾರ್ಪಣೆ ನಂತರ ಇದೀಗ ಅನೇಕ ಹೊಸ ಯೋಜನೆಗಳು ಸಂಸದ ಬಿವೈ ರಾಘವೇಂಧ್ರ ರ ವಿಶೇಷ ಪ್ರಯತ್ನದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ವಿಶೇಷ ಮುತುವರ್ಜಿಯಿಂದ ಅನುಷ್ಠಾನಗೊಳ್ಳಲಿದೆ.575 ಕೋಟಿ ರೂ. ವೆಚ್ಚದ ಶಿವಮೊಗ್ಗ-ಮಂಗಳೂರು ಚತುಷ್ಪಥ ರಸ್ತೆಗೆ ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆಅಂದಾಜು ರೂ. 653 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಶಿವಮೊಗ್ಗದದಿಂದ ಆನಂದಪುರಂವರೆಗೆ ಚತುಷ್ಪಥ ರಸ್ತೆ ನಿರ್ಮಾಣನೆಲ್ಲಿಸರ ಕ್ಯಾಂಪ್‌ನಿಂದ ತೀರ್ಥಹಳ್ಳಿವರೆಗೆ ಚತುಷ್ಪಥ ರಸ್ತೆಕೊಡಚಾದ್ರಿ ರೋಪ್‌ಗೆ ಒಪ್ಪಿಗೆ ನೀಡಲಾಗುವುದು. ಕಾಮಗಾರಿ ಶೀಘ್ರವೇ ಆರಂಭವಾಗಲಿದೆಪ್ರಗತಿಯಲ್ಲಿರುವ ಕಾಮಗಾರಿಗಳು6500 ಕೋಟಿ ವೆಚ್ಚದ ತುಮಕೂರು-ಶಿವಮೊಗ್ಗ 215 ಕಿ.ಮೀ. ಕಾಮಗಾರಿ ಶೇ.90ರಷ್ಟು ಆಗಿದೆ. ಡಿಸೆಂಬರ್ 2025ರಲ್ಲಿ ಉದ್ಘಾಟನೆಗೊಳ್ಳಲಿದೆ. 520 ಕೋಟಿ ರೂ. ವೆಚ್ಚದ ಚಿತ್ರದುರ್ಗ-ಶಿವಮೊಗ್ಗ 102 ಕಿ.ಮೀ ಚತುಷ್ಪಥ ರಸ್ತೆ ಕಾಮಗಾರಿ ಶೇ.85ರಷ್ಟು ಆಗಿದ್ದು, 2026ರಲ್ಲಿ ಉದ್ಘಾಟನೆಸಾಗರ ಪಟ್ಟಣದಲ್ಲಿ 80 ಕೋಟಿ ರೂ. ವೆಚ್ಚದ 1.2 ಕಿ.ಮೀ ಚತುಷ್ಪಥ ರಸ್ತೆ ವಿಸ್ತರಣೆ ಕಾರ್ಯ ಶೇ.85ರಷ್ಟು ಆಗಿದ್ದು, ನವೆಂಬರ್ 2025ರಲ್ಲಿ ಪೂರ್ಣವಾಗಲಿದೆ

[t4b-ticker]
error: Content is protected !!