ಕುಕ್ಕೆ: ರಾಜ್ಯದ ಮುಜರಾಯಿ ವ್ಯಾಪ್ತಿಯ ನಂ 1 ದೇವಸ್ಥಾನ ಕುಕ್ಕೆ ಸುಬ್ರಮಣ್ಯದಲ್ಲಿ ತೀರ್ಥ ಬಾಟಲಿ ವ್ಯವಸ್ಥೆ ಕಲ್ಪಿಸುವಲ್ಲಿ ವಿಳಂಬ ನೀತಿಯೂ ಲಕ್ಷಾಂತರ ಭಕ್ತರ ಭಾವನೆಗೆ ನೋವು ತರುವ ಸಂಗತಿಯಾಗಿದ್ದು ತಕ್ಷಣ ಸರಿಪಡಿಸುವಂತೆ ಕುಕ್ಕೆ ಸುಬ್ರಮಣ್ಯ ದೇವಾಲಯ ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕುಕ್ಕೆ ಸುಬ್ರಮಣ್ಯ ದೇವಸ್ಥಾನ ನಾಗ ಆರಾಧನೆಯ ಪವಿತ್ರ ಸ್ಥಳ ದಿನಪ್ರಂತಿ ಸಾವಿರಾರು ಭಕ್ತರು ರಾಜ್ಯ ಮತ್ತು ಹೊರ ರಾಜ್ಯಗಳಿಂದ ತಮ್ಮ ಇಷ್ಟಾರ್ಥ ಮತ್ತು ಸಂಕಲ್ಪ ನೆರೆವೇರಿಸಲು ಆಗಮಿಸುತ್ತಾರೆ.ಮುಜರಾಯಿ ಇಲಾಖೆಗೆ ಒಳಪಟ್ಟ ನಂ 1 ದೇವಸ್ಥಾನವಾಗಿದ್ದು ಇಂತಹ ನಂಬಿಕೆಯ ಕ್ಷೇತ್ರದಲ್ಲಿ ಪ್ರಸ್ತುತ ಮೂಲ ಪ್ರಸಾದದ ಪವಿತ್ರ ತೀರ್ಥ ಬಾಟಲಿ ಸರಿಯಾಗಿ ನೀಡದೆ ಸಾವಿರಾರು ಭಕ್ತರನ್ನು ಸತಾಯಿಸುತ್ತಿರುವುದು ಸರಿಯಾದ ಕ್ರಮವಲ್ಲ ದೂರದ ಊರುನಿಂದ ಶ್ರದ್ದೆ ಭಕ್ತಿಯಿಂದ ಸೇವೆ ಸಲ್ಲಿಸುವ ಭಕ್ತರಿಗೆ ಈ ನಡೆ ನೋವು ತಂದಿದೆ,ದೇವರ ಪ್ರಸಾದ ವಿತರಣೆಯಲ್ಲಿ ಈ ಅಸಡ್ಡೆ ಧಾರ್ಮಿಕ ಭಾವನೆಗಳಿಗೆ ನೋವು ತಂದಿದ್ದು ತಕ್ಷಣ ಮುಜರಾಯಿ ಇಲಾಖೆ ಮತ್ತು ಆಡಳಿತ ಮಂಡಳಿ ಸೂಕ್ತ ವ್ಯವಸ್ಥಿತ ಸೌಲಭ್ಯ ಕಲ್ಪಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ಪ್ರಸನ್ನ ದರ್ಬೆ ಅಗ್ರಹಿಸಿದ್ದಾರೆ
ಮುಜರಾಯಿ ನಂ. 1 ದೇವಸ್ಥಾನ ಕುಕ್ಕೆ ಸುಬ್ರಮಣ್ಯ | ಕುಕ್ಕೆ ಮೂಲ ಪ್ರಸಾದ ತೀರ್ಥ ವ್ಯವಸ್ಥೆ ವಿಳಂಬ ಭಕ್ತಾದಿಗಳ ನಂಬಿಕೆ,ಭಾವನೆಗಳಿಗೆ ತಕ್ಷಣ ಸ್ಪಂದಿಸುವಂತೆ ದೇವಾಲಯ ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆ ಒತ್ತಾಯ
Savistara
Bureau Report
[t4b-ticker]











































