ರಾಮನಗರ: ರಾಮನಗರ: ಜೆಡಿಎಸ್ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟರ್ಗಳನ್ನು ಅಂಟಿಸಿರುವುದಕ್ಕೆ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪೋಸ್ಟರ್ಗಳನ್ನು ಅಂಟಿಸುತ್ತಿರು ವಂತೆ ಎ.ಐ ವಿಡಿಯೊವನ್ನು ಫೇಸ್ಬುಕ್ನ ‘kumaraswamy for CM’ ಎಂಬ ಖಾತೆಯಲ್ಲಿ ‘ಹಳೇ ಚಾಳಿ ಮತ್ತೆ ಶುರು.
ಸುಟ್ಟರು ಹೋಗದ ಹುಟ್ಟು ಗುಣ’ ಸಾಲಿನೊಂದಿಗೆ ಪೋಸ್ಟ್ ಮಾಡಿದೆ.ಶಿವಕುಮಾರ್ ಹೋಲುವ ಎ.ಐ ಸೃಷ್ಟಿತ ವ್ಯಕ್ತಿ ಪೋಸ್ಟರ್ ಅಂಟಿಸುವಾಗ ಬರುವ ವ್ಯಕ್ತಿಯೊಬ್ಬ, ‘ಏನಣ್ಣಾ.. ಏನು ಮಾಡುತ್ತಿದ್ದೀಯಾ? ಕಳ್ಳನ ತರ ಪೋಸ್ಟರ್ ಅಂಟಿಸುತ್ತಿದ್ದಿಯಾ?’ ಎನ್ನುತ್ತಾನೆ. ಅದಕ್ಕೆ ಎ.ಐ ವ್ಯಕ್ತಿ, ‘ಸುಮ್ನಿರೊ, ಮೊದಲಿನಿಂದಲೂ ನಾನು ಇದನ್ನೇ ತಾನೇ ಮಾಡಿಕೊಂಡು ಬಂದಿರೋದು’ ಎನ್ನುತ್ತಾನೆ.
ರೈತರಿಗೆ ಮೋಸ ಮಾಡೋದು ತಪ್ಪಲ್ಲವಾ ಅಣ್ಣಾ?’ ಎಂಬ ಪ್ರಶ್ನೆಗೆ, ‘ಲೇ ಮೋಸ ಮಾಡಿ ಬೇರೆಯವರ ಮೇಲೆ ಎತ್ತಾಕಬೇಕು. ಆವಾಗ್ಲೆ ನಾವು ಚನ್ನಾಗಿರೋದು’ ಎನ್ನುವ ಎ.ಐ ವ್ಯಕ್ತಿ, ನಿನಗೊಂದು ಮಾತ ಹೇಳುತ್ತೇನೆ ನೋಡು ಎಂದು ಮಾತು ಮುಗಿಸುತ್ತಿ ದ್ದಂತೆ, ‘ಯಾರಾದ್ರು ಹಾಳಾಗೋಗ್ಲಿ ನಾವ್ ನೆಟ್ಗಿದ್ರೆ ಸಾಕು. ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು’ ಎಂಬ ಹಾಡಿನ ಎರಡು ಸಾಲುಗಳೊಂದಿಗೆ ವಿಡಿಯೊ ಕೊನೆಗೊಳ್ಳುತ್ತದೆ.
https://www.facebook.com/share/r/1BwfTzny9N/: ಡಿಕೆಶಿ ಪೋಸ್ಟರ್ ಅಂಟಿಸುವ ಎ.ಐ ವಿಡಿಯೊ ಹಂಚಿಕೊಂಡ ಜೆಡಿಎಸ್











































