ಎಪಿಕೆ ಫೈಲ್ ಬಂದರೆ ಹುಷಾರ್! ಟ್ರಾಫಿಕ್ ಫೈನ್ ಹೆಸರಲ್ಲೂ ವಂಚನೆಗೆ ಇಳಿದ ಸೈಬ‌ರ್ ಖದೀಮರು

Picture of Savistara

Savistara

Bureau Report

ಸಂಚಾರ ನಿಯಮ ಉಲ್ಲಂಘನೆಗೆ ದಂಡ ಪಾವತಿಸಿ ಎಂದು ಅನುಚಿತರು ವಾಟ್ಸಾಪ್‌ ಅಂಡ್ರಾಯ್ಡ್ ಪ್ಯಾಕೇಟ್ ಕಿಟ್ (ಎಪಿಕೆ) ಫೈಲ್ ಕಳಿಸಿದರೆ ತಕ್ಷಣ ಲಿಂಕ್ ಕ್ಲಿಕ್ ಮಾಡಬೇಡಿ. ಒಂದು ವೇಳೆ ಕ್ಲಿಕ್ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಜತೆಗೆ ಬ್ಯಾಂಕ್ ಸಾಶೆಯಲ್ಲಿರುವ ಹಣವೂ ಕೆಲವೇ ಕ್ಷಣಗಳಲ್ಲಿ ಮಾಯವಾಗಲಿದೆ..!ಹತ್ತಾರು ವೇಷ ಧರಿಸಿ ಸಾರ್ವಜವಿಕರ ಬ್ಯಾಂಕ್. ಖಾತೆಗಳಿಗೆ ಕನ್ನ ಹಾಕುತ್ತಿರುವ ಸೈಬರ್ ಖದಿಮರು, ಈಗ ಸಂಚಾರ ಪೊಲೀಸರ ಹೆಸುವಲ್ಲೂ ವಂಚನೆ ಮಾಡುತ್ತಿದ್ದಾರೆ. ದಂಡ ಪಾವತಿಯ ಎಪಿಕೆ ಫೈಲ್ಗಳ ಲಿಂಕ್ ಕಳುಹಿಸಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿರುವುದು ಮುಂದುವರಿದಿದೆ.ಸೈಬರ್ ವಂಚಕರ ಹೊಸ ತಂತ್ರಕ್ಕೆ ಸಿಲುಕಿದ ಕೆಂಗೇರಿ ಉಪನಗರದ ಎನ್.ಎಸ್. ಶಿವಾನಂದಸ್ವಾಮಿ (58) ತಮ್ಮ ತಾಯಿಯ ಬ್ಯಾಂಕ್ ಖಾತೆಯಲ್ಲಿನ 1.50 ಲಕ್ಷ ರೂ. ಕಳೆದು ಕೊಂಡಿದ್ದಾರೆ. ಈ ಕುರಿತು ಶಿವಾನಂದಸ್ವಾಮಿ ನೀಡಿರುವ ದೂರು ಆಧರಿಸಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು. ತನಿಖೆ ಮುಂದುರಿಸಿದ್ದಾರೆ.1 ರೂ. ಕಳೆಸಿ 1.50 ಲಕ್ಷ ರೂ. ದೋಚಿದ್ರು : ಶಿವಾನಂದಸ್ವಾಮಿ ಅವರ 80 ವರ್ಷದ ವರ್ಷದ ವೃದ್ಧ ತಾಯಿ ಗಂಗಮ್ಮ ಹೆಸರಿನಲ್ಲಿ ಕೆನರಾ ಬ್ಯಾಂಕ್ ಖಾತೆಯಿದ್ದು, ಖಾತೆಗೆ ಶಿವಾನಂದ ಸ್ವಾಮಿ ಅವರ ಮೊಬೈಲ್ ನಂಬರ್ ಲಿಂಕ್ ಆಗಿತ್ತು. ಏ.9ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಗಂಗಮ್ಮ ಬ್ಯಾಂಕ್ ಖಾತೆಗೆ 1 ರೂ. ಸಂದಾಯವಾಗಿತ್ತು. ಇದಾದ ಬಳಿಕ ಶಿವಾನಂದಸ್ವಾಮಿ ವಾಟ್ಸಾಪ್ ನಂಬರ್‌ ಅನುಚಿತ ನಂಬರ್‌ನಿಂದ ಎಪಿಕೆ ಫೈಲ್ ಬಂದಿದ್ದು, ‘ನಿಮ್ಮ ವಾಹನದ ಸಂಚಾರ ನಿಯು ಉಲ್ಲಂಘನೆ ದಂಡ ಬಾಕಿ ಉಳಿದಿದೆ. ಎಪಿಕೆ ಫೈಲ್‌ ಲಿಂಕ್ ಕ್ಲಿಕ್ ಮಾಡಿ ದಂಡ ಪಾವತಿಸಿ, ಇಲ್ಲದಿದ್ದರೆ ವಾರೆಂಟ್ ಜಾರಿ ಯಾಗಲಿದ್ದು ಬಂಧಿಸಬೇಕಾಗುತ್ತದೆ’ ಎಂಬ ಸಂದೇಶವಿತ್ತು.

ಪೊಲೀಸರ ಕಡೆಯಿಂದಲೇ ಸಂದೇಶ ಬಂದಿರಬಹುದು ಎಂದು ಭಾವಿಸಿದ ಶಿವಾನಂದ ಅವರು, ಎಪಿಕೆ ಫೈಲ್ ಲಿಂಕ್ ಕ್ಲಿಕ್ ಮಾಡಿದ್ದಾರೆ. ತಕ್ಷಣ ಮೊಬೈಲ್ ಹ್ಯಾಕ್ ಆಗಿದ್ದು, ಕೆಲ ನಿಮಿಷವರ್ಕ್ ಆಗಿಲ್ಲ. ಇದಾದ ಬಳಿಕ ಮೊಬೈಲ್ ಕಾರ್ಯ ನಿರ್ವಹಣೆಗೆ ಲಭ್ಯವಾಗಿದ್ದು ಗಂಗಮ್ಮನ ಖಾತೆಯಲ್ಲಿದ್ದ 1.50 ಲಕ್ಷ ರೂ. ಕಡಿತಗೊಂಡಿರುವ ಸಂದೇಶ ಬಂದಿದೆ. ಸೈಬರ್ ವಂಚನೆ ಬಳಿಕ ಎಚ್ಚೆತ್ತ ಶಿವಾನಂದ ಅವರು ಸೈಬರ್ ಸಹಾಯವಾಣಿ 1930ಗೆ ಕರೆ ಮಾಡಿ ದೂರು ನೀಡಿದ್ದಾರೆ. ಬಳಿಕ ಕೆಂಗೆಳು ಠಾಣೆಯಲ್ಲೂ ದೂರು ಸಲಿಸಿದ್ದಾರೆ.ವಂಚನೆ ಬಗ್ಗೆ ‘ವಿಜಯ ಕರ್ನಾಟಕ’ ಜತೆ ಮಾತನಾಡಿದ ಶಿವಾನಂದ, ”ಪೊಲೀಸರೇ ಸಂದೇಶ ಕಳಿಸಿರಬಹುದೆಂದು ಅಚಾನಕ್ಕಾಗಿ ಎಪಿಕೆ ಫೈಲ್ ಲಿಂಕ್ ಕ್ಲಿಕ್ ಮಾಡಿದೆ. ಕೂಡಲೇ ನನ್ನ ಮೊಬೈಲ್ ಹ್ಯಾಕ್ ಮಾಡಿದ್ದ ನೈಬರ್ ವಂಚಕರು, ಬ್ಯಾಂಕ್ ಖಾತೆ ವಿವರ ಸಂಗ್ರಹಿಸಿದ್ದಾರೆ. ಬಳಿಕ ಆಟೋ ಮ್ಯಾಟಿಕ್ ಒಟಿಪಿ ಅವರೇ ಪಡೆದುಕೊಂಡು ಹಣ ವರ್ಗಾ ವಣೆ ಮಾಡಿಕೊಂಡಿದ್ದಾರೆ. ನಮ್ಮ ತಾಯಿ ಬ್ಯಾಂಕ್ ಖಾತೆ ಯಲ್ಲಿದ್ದ ಹಣ ಪೂರ್ತಿ ದೋಚಿದ್ದಾರೆ,” ಎಂದು ತಿಳಿಸಿದರು.

ಸೈಬರ್ ತಜ್ಞರ ಸಲಹೆಗಳೇನು?

‘ವಂಚನೆ ಸಲುವಾಗಿಯೇ ಸೈಬರ್ ಕ್ರಿಮಿಗಳು ಎಪಿಕೆ ಫೈಲ್ ಗಳನ್ನು ಸೃಷ್ಟಿಸಿರುತ್ತಾರೆ. ಹಬ್ಬದ ಶುಭಾಶಯ, ಗ್ರೀಟಿಂಗ್ ಕಾರ್ಡ್ ಕಳುಹಿಸುವ ನೆಪದಲ್ಲಿ ಎಪಿಕೆ ಫೈಲ್ಗಳನ್ನು ವಾಟ್ಸಾಪ್ ಮುಖಾಂತರ ಕಳಿಸುತ್ತಾರೆ. ಇವುಗಳನ್ನು ಕ್ಲಿಕ್ ಮಾಡಿದ ಕೂಡಲೇ ಇಡೀ ಮೊಬೈಲ್‌ನ ಡೇಟಾ ವಂಚಕರಿಗೆ ಲಭ್ಯವಾಗಲಿದ್ದು, ಖಾಸಗಿ ಮಾಹಿತಿಯನ್ನು ಕದಿಯುತ್ತಾರೆ. ಜತೆಗೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಬರುವ ಒಟಿಪಿ ಪಡೆದು ಅದನ್ನು ಬಳಸಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ,” ಎಂದು ಸೈಬರ್ ತಜ್ಞಡಾ.ಹರ್ಷ ತಿಳಿಸುತ್ತಾರೆ.”ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್‌ನಲ್ಲಿ ಹೊರತುಪಡಿಸಿ ಎಪಿಕೆ ಫೈಲ್ಗಳಲ್ಲಿ ಯಾವುದನ್ನೂ ಡೌನ್ ಲೋಡ್ ಮಾಡಬಾರದು. ಮೊಬೈಲ್‌ನಲ್ಲಿ ಆ್ಯಂಟಿ ವೈರಸ್ ಇನ್ಸ್‌ಟಾಲ್ ಮಾಡಿಕೊಂಡಿರಬೇಕು. ಇದರಿಂದ ಸ್ಪೆವೇರ್ ಬಳಸಿರುವ ಎಪಿಕೆ ಫೈಲ್ ಗಳನ್ನು ಡೌನ್ ಲೋಡ್ ಮಾಡಿದರೂ ಮೊಬೈಲ್ ನಲ್ಲಿನ ಮಾಹಿತಿ ಕದಿಯುವುದನ್ನು ತಡೆಗಟ್ಟಲು ಅವಕಾಶವಿದೆ. ಅಲ್ಲದೆ, ಅಪರಿಚಿತರು ಮಾತ್ರವಲ್ಲದೆ ಪರಿಚಯಸ್ಥರು ಕೂಡ ಕಳುಹಿಸುವ ಎಪಿಕೆ ಫೈಲ್ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಾರದು,” ಎಂದು ಹರ್ಷ ಸಲಹೆ ನೀಡಿದರು.

ಪೊಲೀಸರು ಹೇಳುವುದೇನು?

ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಮನೆಗೆ ನೋಟಿಸ್ ಬರಲಿದೆ. ವಾಟ್ಸಾಪ್ ಮುಖಾಂತರ ದಂಡ ಪಾವತಿ ಸಂಬಂಧ ಯಾವುದೇ ಲಿಂಕ್ ಫೈಲ್‌ಗಳನ್ನು ಕಳುಹಿಸುವುದಿಲ್ಲ. ವಾಹನ ಸವಾರರು ಇಲಾಖೆಯ ಅಧಿಕೃತ ವೆಬ್‌ಸೈಟ್ ಇಲ್ಲವೇ ಠಾಣೆಗೆ ತೆರಳಿ ದಂಡ ಕಟ್ಟಬಹುದು. ವಂಚಕರು ಕಳಿಸುವ ಎಪಿಕೆ ಫೈಲ್‌ಗಳನ್ನು ನಂಬಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಲಹೆ ಮಾಡಿದ್ದಾರೆ.

[t4b-ticker]
error: Content is protected !!