ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಶಿಬಿರವನ್ನು ಮುಳ್ಳೇರಿಯ ಗಣೇಶ ಕಲಾಮಂದಿರದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಕಾಸರಗೋಡು ಜಿಲ್ಲೆಯ B. K.S,ಅಧ್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ ವಹಿಸಿದ್ದರು, ರಾಜ್ಯಉಪಾಧ್ಯಕ್ಷರಾದ ಯನ್.ರಾಮಮಾಸ್ತರ್ ಮಾತನಾಡಿದರು.

PMPBY.ಯ ಜಿಲ್ಲಾಕೋ ಆರ್ಡಿನೇಟರ್ ಅಜಿತ್ ಕುಮಾರ್.ಯು, ಉದ್ಘಾಟಿಸಿ,ಮಾಹಿತಿಯನ್ನು ನೀಡಿದರು. ತಾಲೂಕು ಕೋಆರ್ಡಿನೇಟರ್ ರವೀಂದ್ರ ಶೆಟ್ಟಿ, ಕಾರಡ್ಕಬ್ಲೋಕ್ BKS ಅಧ್ಯಕ್ಷ ಕೆ.ಜಗಜೀವನ್ ದಾಸ್.ರೈಉಪಸ್ಥಿತರಿದ್ದರು. ಬೆಳೆವಿಮೆ ಅರ್ಜಿನೀಡಲು ಬಂದಿರುವ ಕೃಷಿಕರ ಎಲ್ಲಾ ಅರ್ಜಿಗಳನ್ನು ಭರ್ತಿಮಾಡಿ, ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಕಾರ್ಯದರ್ಶಿ ಸಚಿನ್ ಕುಮಾರ್ ಸ್ವಾಗತಿಸಿ ಉಪಾಧ್ಯಕ್ಷರಾದ ಡಾ.ಶಿವರಾಯ ಭಟ್ ಧನ್ಯವಾದ ಸಮರ್ಪಿಸಿದ್ದರು.











































