ಲೋಕಾಯುಕ್ತ ದಾಳಿ:ಕ್ರೈಸ್‌ ಎಸ್‌ಇ ಜನಾರ್ಧನ್ ಮನೆಯಲ್ಲಿ ₹1.70 ಕೋಟಿ ನಗದು ಪತ್ತೆ

Picture of Savistara

Savistara

Bureau Report

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಸೂಪರಿಂಟೆಂಡೆಂಟ್ ಎಂಜಿನಿಯರ್ ಎಚ್.ಎಂ.ಜನಾರ್ಧನ್ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ₹1.70 ಕೋಟಿ ನಗದು ಪತ್ತೆಯಾಗಿದೆ.

ಜನಾರ್ಧನ್ ಮತ್ತು ಅವರ ಆಪ್ತರ ಮನೆಗಳ ಮೇಲೆ ಬೆಳಿಗ್ಗೆಯೇ ದಾಳಿ ನಡೆಸಲಾಗಿದ್ದು, ಶೋಧ ಮುಂದುವರೆದಿದೆ. ನಗದು ಎಣಿಕೆ ಮಾಡಲು ಯಂತ್ರಗಳನ್ನು ಬಳಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.ಶೋಧ ಮುಂದುವರೆದಿದ್ದು, ಆಪಾದಿತ ಅಧಿಕಾರಿಯ ಒಟ್ಟು ಆಸ್ತಿಯ ವಿವರ ನೀಡಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

[t4b-ticker]
error: Content is protected !!