ಸುಳ್ಯ: ವಿನೋಬಾ ನಗರದ ವಿವೇಕಾನಂದ ವಿದ್ಯಾಸಂಸ್ಥೆ ಯಲ್ಲಿ ವಿದ್ಯಾರ್ಥಿ ದಿವಸವು ಜು.10 ರಂದು ನಡೆಯಿತು.ಈ ಕಾರ್ಯಕ್ರಮದಲ್ಲಿ ಕು. ಮಂದಾರ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯೆ ಅವರು ವಿದ್ಯಾರ್ಥಿ ಪರಿಷತ್ ಸ್ಥಾಪನೆ ಮತ್ತು ಕಾರ್ಯವೈಖರಿಯನ್ನ ವಿವರಿಸಿದರು.

ಜಿಲ್ಲಾ ಸಂಚಾಲಕ ಸಮನ್ವಿತ್ ಅವರು ಸದಸ್ಯತ್ವದ ಮಹತ್ವವನ್ನು ತಿಳಿಸಿದರು. ಮುಖ್ಯಉಪಾಧ್ಯಾಯರದ ಗಿರೀಶ್ ಅವರು ವೇದಿಕೆ ಅಲ್ಲಿ ಉಪಸ್ಥಿತರಿದ್ದರು.

ಸುಳ್ಯ ತಾಲ್ಲೂಕು ಸಂಚಾಲಕ ನಂದನ್ ಇವರು ಪ್ರಸ್ತಾವಿಕ ಮಾತನಾಡಿ ವಂದನಾರ್ಪಣೆ ಸಲ್ಲಿಸಿದರು. ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಅಮೃತಾಂಬ ಹಾಗೂ ಕಾಲೇಜು ಘಟಕದ ಅಧ್ಯಕ್ಷ ಕಿಶನ್ ಉಪಸ್ಥಿತರಿದ್ದರು.














































