
ಹೊಸ ಆಲೋಚನೆಗಳಿಗೆ ದಿಕ್ಕು ತೋರುವ, ನವೋದ್ಯಮ ಸಂಸ್ಥಾಪಕರು ತಮ್ಮ ಮಾರ್ಗದರ್ಶಕರನ್ನು ಕಂಡುಕೊಳ್ಳುವ ಮತ್ತು ಹೊಸ ಆರಂಭಗಳಿಗೆ ನಂಬಿಕೆಯನ್ನು ತುಂಬುವ ಸದುದ್ದೇಶದ ಪ್ರಯತ್ನ ಮತ್ತು ನವಯುಗ ನವಪಥ’ ಎಂಬ ಕಾರ್ಯಸೂಚಿಯನ್ನು ನಾನು ಸಿದ್ಧಪಡಿಸುವಾಗ, ನನ್ನ ಮನಸ್ಸಿನಲ್ಲಿ ಮೊದಲಿಗೆ ಇದ್ದದ್ದು; ನಮ್ಮ ದೇಶಕ್ಕೆ ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಸಂಸ್ಥೆಗಳನ್ನು ನೀಡಿದ ಈ ಶ್ರೀಮಂತ ಪರಂಪರೆಯನ್ನು ಹೊಂದಿದ ನೆಲದಲ್ಲಿ, ಉದ್ಯಮಶೀಲತಾ ಮನೋಭಾವವನ್ನು ಪುನರುಜ್ಜೀವನಗೊಳಿಸಲು ಮತ್ತೆ ಶತಪ್ರಯತ್ನ ಮಾಡುವುದಾಗಿದೆಯೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಮಂಗಳೂರಿನಲ್ಲಿ “ಬೊಲ್ಪು ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ
ಬೊಲ್ಪು’ ಈ ದಿಸೆಯಲ್ಲಿ ಮೊದಲ ಹೆಜ್ಜೆಯಾಗಿದೆ, ಇದು ನಮ್ಮ ಪ್ರಧಾನ ಮಂತ್ರಿ ಮೋದಿಯವರ ದೃಷ್ಟಿಕೋನವನ್ನು ಮಂಗಳೂರಿನಲ್ಲಿ ಸಾಕಾರಗೊಳಿಸಲು ಸಹಾಯ ಮಾಡಲಿದೆಯೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್,ಜಿಲ್ಲಾಧಿಕಾರಿ ದರ್ಶನ್ ಹೆಚ್ .ವಿ ಮತ್ತಿತರರು ಉಪಸ್ಥಿತರಿದ್ದರು














































