ಯಲವಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಯಲವಟ್ಟಿ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಡಾ. ಧನಂಜಯ ಸರ್ಜಿ ಪಾಲ್ಗೊಂಡು, ಉದ್ಘಾಟಿಸಿರು.

ಈ ವೇಳೆ ಗ್ರಾಮದ ಶ್ರೀ ಈಶ್ವರ ಪಾರ್ವತಿ ದೇವಸ್ಥಾನಕ್ಕೆ ಭೇಟಿ ನೀಡಿದ ಡಾ. ಧನಂಜಯ ಸರ್ಜಿ , ದರ್ಶನ ಪಡೆದುಕೊಂಡರು, ಕಾರ್ಯಕ್ರಮದಲ್ಲಿ ಯಲವಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತಿದ ಅಧ್ಯಕ್ಷರಾದ ವೈ ಆರ್ ಧನಂಜಯ್ ಅವರು, ಶಿಮುಲ್ ನಿರ್ದೇಶಕರಾದ ದಿನೇಶ್ ಬಳ್ಳಾಪುರ, ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾದ ಮಹಾಲಿಂಗಯ್ಯ ಶಾಸ್ತ್ರೀ ಅವರು,

ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಅವರು, ಮಾಮ್ ಕೋಸ್ ನಿರ್ದೇಶಕರಾದ ವಿರುಪಾಕ್ಷಪ್ಪ ಅವರು, ಶಿಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಶೇಖರ್ ಎಸ್.ಜಿ ಅವರು, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳು ಪುರದಾರ ಪೂಜಾರಿ ಅವರು, ಯಲವಟ್ಟಿ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.











































