ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಕಸವನ್ನು ಪೌರ ಕಾರ್ಮಿಕರು ಸುಸಜ್ಜಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ 15ನೇ ಹಣಕಾಸು ಹಾಗೂ NMPC, MPIC ಯೋಜನೆಯಡಿ ಖರೀದಿಸಿದ ಆಟೋ ಟಿಪ್ಪರ್, ಮಿನಿ ಹಿಟಾಚಿ, ಹಸಿ ಕಸ-ಒಣ ಕಸ ವಿಂಗಡಿಸಲು 20 ಸಾವಿರ ಡಸ್ಟ್ ಬಿನ್ ಸೇರಿದಂತೆ ಇನ್ನಿತರ ಪ್ರಮುಖ ವಾಹನವನ್ನು ಹಾಗೂ ಸಲಕರಣೆಗಳನ್ನು ಇಂದು ಪುರಸಭೆಗೆ ಹಸ್ತಾಂತರಿಸಲಾಯಿತು.

ಇದರೊಂದಿಗೆ ಪಟ್ಟಣದ ಸೌಂದರ್ಯವನ್ನು ಇನ್ನಷ್ಟು ಅಂದಗಾಣಿಸಲು ಪ್ರಮುಖ ವೃತ್ತಗಳಲ್ಲಿ ಬಸವೇಶ್ವರ ಪುತ್ಥಳಿ, ಸಂಗೊಳ್ಳಿ ರಾಯಣ್ಣ ಪುತ್ಥಳಿ,

ಅಂಬೇಡ್ಕರ್ ಪುತ್ಥಳಿ ಅಭಿವೃದ್ಧಿ ಯೋಜನೆ ಸೇರಿದಂತೆ ಉದ್ಯಾನವನ, ರಸ್ತೆ, ಕಾರ್ಮಿಕರ ವಿಶ್ರಾಂತಿ ಕೊಠಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಜೊತೆಗೆ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಾಣ ಮಾಡಿರುವ ಮಹಿಳಾ ವಿಶ್ರಾಂತಿ ಕೊಠಡಿ ಉದ್ಘಾಟಿಸಿ,

ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ QR Code ಹಾಗೂ ನಾಮ ಫಲಕ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ಶಾಸಕರಾದ ಬಿ.ವೈ. ವಿಜಯೇಂದ್ರ,

ಪುರಸಭೆ ಅಧ್ಯಕ್ಷೆ ಸುನಂಧ , ಉಪಾಧ್ಯಕ್ಷೆ ರೂಪ, ಸ್ಥಾಯಿ ಸಮಿತಿ ಅಧ್ಯಕ್ಷರ ರಮೇಶ್ , ಪುರಸಭೆ ಅಧಿಕಾರಿ ಭರತ್ ಅವರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.











































