ಬಿಜೆಪಿಯ ದಶಕಗಳ ಶ್ರಮಕ್ಕೆ ಈ ಬಾರಿಯಾದರು ಸಿಗುತ್ತಾ ಯಶಸ್ಸು..? ಕೇರಳದ ರಾಜಕೀಯ ಸ್ಥಿತ್ಯಂತರಗಳ ಅವಲೋಕನ ಇಲ್ಲಿದೆ!

Picture of Savistara

Savistara

Bureau Report

Kerala BJP: ಕೇರಳದ ರಾಜಕೀಯ ಇತಿಹಾಸವು ಎಡ ಪ್ರಜಾಸತ್ತಾತ್ಮಕ ರಂಗ (LDF) ಮತ್ತು ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (UDF) ನಡುವಿನ ದ್ವಿಪಕ್ಷೀಯ ಸ್ಪರ್ಧೆಗೆ ಹೆಸರುವಾಸಿ. ಎರಡು ಬಣಗಳ ನಡುವೆ ಮೂರನೇ ಶಕ್ತಿಯ ರಚನೆಗೆ ಅವಕಾಶ ನೀಡದ ಈ ರಾಜ್ಯದಲ್ಲಿ, ಭಾರತೀಯ ಜನತಾ ಪಕ್ಷ ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ತನ್ನ ಅಸ್ತಿತ್ವ ನಿರ್ಮಿಸಲು ಸತತ ಪ್ರಯತ್ನ ನಡೆಸುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಾದರು ತನ್ನ ಕನಸ್ಸನ್ನು ಬಿಜೆಪಿ ನನಸು ಮಾಡಿಕೊಳ್ಳುವುದೇ ಕಾದು ನೋಡಬೇಕಿದೆ.

ಸಾಂಸ್ಥಿಕ ಬೇರುಗಳು ಮತ್ತು ನಾಯಕತ್ವದ ಶ್ರಮಪಕ್ಷದ ಆರಂಭಿಕ ಸಾಂಸ್ಥಿಕ ಬೇರುಗಳು 1970 ರ ದಶಕದ ಉತ್ತರಾರ್ಧ ಮತ್ತು 1980 ರ ದಶಕದ ಆರಂಭದಲ್ಲಿ ಜನ ಸಂಘದ ಕೇರಳ ಘಟಕದೊಂದಿಗೆ ಸಂಬಂಧ ಹೊಂದಿದ್ದ ನಾಯಕರ ಪ್ರಯತ್ನಗಳ ಮೂಲಕ ನೆಡಲ್ಪಟ್ಟವು. ತದನಂತರ 1990 ರ ದಶಕದಲ್ಲಿ ಬೂತ್​ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಅಂದಿನ ನಾಯಕರು ಶ್ರಮವಹಿಸಿದರು.ಓ ರಾಜಗೋಪಾಲ್, ಕುಮ್ಮನಂ ರಾಜಶೇಖರನ್ ಮತ್ತು ಇತರ ರಾಜ್ಯ ಮಟ್ಟದ ನಾಯಕರು ಜಿಲ್ಲೆಗಳಲ್ಲಿ ಪಕ್ಷದ ಸಾಂಸ್ಥಿಕ ಜಾಲ, ಪ್ರಚಾರ ರಚನೆ ಮತ್ತು ಸೈದ್ಧಾಂತಿಕ ಪ್ರಭಾವವನ್ನು ಬಲಪಡಿಸುವಲ್ಲಿ ತಮ್ಮದೇ ಆದ ಪಾತ್ರವನ್ನು ನಿಭಾಯಿಸಿದ್ದಾರೆ. ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ಅನೇಕ ವರ್ಷಗಳ ಕಾಲ ಹೆಣಗಾಡುತ್ತಲೇ ಬಂದಿದ್ದರೂ, ಬೂತ್ ಮಟ್ಟದ ಕೆಲಸ, ಸ್ಥಳೀಯ ಪ್ರಚಾರಗಳು ಮತ್ತು ನಿರಂತರ ರಾಜಕೀಯ ಚಟುವಟಿಕೆಗಳಲ್ಲಿ ಹಿಂದೆ ಬಿದ್ದಿಲ್ಲ.ಮತ ಹಂಚಿಕೆಯ ಸ್ಥಿರ ಬೆಳವಣಿಗೆಯ ಗ್ರಾಫ್ಕೇರಳದಲ್ಲಿ ಬಿಜೆಪಿಯ ಮತ ಪಾಲು ಹೆಚ್ಚುತ್ತಾ ಹೋಗುತ್ತಿವೆಯಾದರೂ ಕೂಡ, ಅವು ಸೀಟುಗಳಾಗಿ ಪರಿವರ್ತನೆಯಾಗಿತ್ತಿಲ್ಲ,

1982 0/140 2.8%

1987 0/140 5.6%

1991 0/140 4.8%

1996 0/140 5.5%

2001 0/140 5%

2006 0/140 4.7%

2011 0/140 6%

2016 1/140 10.6%

2021 0/140 11.4%

2026ಚುನಾವಣೆ ನಡೆಯಬೇಕಿದೆ

2016ರ ಚುನಾವಣೆ: ಈ ಚುನಾವಣೆಯಲ್ಲಿ ಬಿಜೆಪಿ ಶೇ. 10.53 (ಸುಮಾರು 10.6%) ಮತಗಳನ್ನು ಗಳಿಸಿತು. ಇದೇ ಮೊದಲ ಬಾರಿಗೆ ಓ. ರಾಜಗೋಪಾಲ್ ಅವರ ಮೂಲಕ ನೆಮಮ್ ಕ್ಷೇತ್ರದಲ್ಲಿ ಜಯಗಳಿಸಿ ಕೇರಳ ವಿಧಾನಸಭೆಯಲ್ಲಿ ಪಕ್ಷವು ಖಾತೆ ತೆರೆಯಿತು.

2021ರ ಚುನಾವಣೆ: ಈ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆಯು 11.3% ಕ್ಕೆ ತಲುಪಿತು ಆದರೆ, ದುರದೃಷ್ಟವಶಾತ್ ಪಕ್ಷವು ತನ್ನ ಏಕೈಕ ಸ್ಥಾನವನ್ನು (ನೆಮಮ್) ಕಳೆದುಕೊಂಡು ಶೂನ್ಯಕ್ಕೆ ಇಳಿಯಿತು.

2024 ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ, ಪತ್ತನಂತಿಟ್ಟ ಮತ್ತು ತ್ರಿಶೂರ್‌ನಂತಹ ಕ್ಷೇತ್ರಗಳಲ್ಲಿ ಬಿಜೆಪಿ ಗಮನಾರ್ಹ ಮತ ಪಡೆಯಿತು, ಅದರಲ್ಲೂ ತ್ರಿಶೂರ್‌ನಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾದರು.

ಈ ಹಿಂದೆ ನಡೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಕ್ಷವು ವಿವಿಧ ಮೈತ್ರಿಕೂಟಗಳನ್ನು ಪ್ರಯೋಗಿಸಿದ್ದು, ರಾಜ್ಯದಲ್ಲಿರುವ ಎಲ್​ಡಿಎಫ್​ ಮತ್ತು ಯುಡಿಎಫ್​ ನಡುವೆ ಎನ್‌ಡಿಎ ಮೈತ್ರಿಕೂಟ ಮೂರನೇ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮುವ ಗುರಿಯನ್ನು ಇಟ್ಟುಕೊಂಡಿದೆ.

ಮೈತ್ರಿಕೂಟದ ವಿಕಸನ ಮತ್ತು ಸಾಮಾಜಿಕ ಸಮೀಕರಣ

ಕೇರಳದ ವಿಶಿಷ್ಟ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಭಾರತ್ ಧರ್ಮ ಜನ ಸೇನೆ (BDJS) ರೀತಿಯ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿದೆ. ಈ ಮೈತ್ರಿಯು ವಿಶೇಷವಾಗಿ ಹಿಂದುಳಿದ ವರ್ಗಗಳ ಮತಗಳನ್ನು ಕ್ರೋಢೀಕರಿಸಲು ನೆರವಾಗಿದೆ. ಇದರೊಂದಿಗೆ, ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ತಲುಪುವ ಮೂಲಕ ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ತಳಮಟ್ಟದ ಸಂಘಟನೆ ಬಲಪಡಿಸುವಲ್ಲಿ ಈ ಮೈತ್ರಿಗಳು ಪ್ರಮುಖ ಪಾತ್ರ ವಹಿಸಿವೆ.

2026ರ ಏಪ್ರಿಲ್ 9 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸಜ್ಜಾಗಿದ್ದು, ಪ್ರಬಲ ಪ್ರಾದೇಶಿಕ ಶಕ್ತಿಗಳನ್ನು ಒಳಗೊಂಡಿದೆ.

ಈ ಬಾರಿಯ ಒಕ್ಕೂಟದಲ್ಲಿರುವ ಪಕ್ಷಗಳು

ಭಾರತೀಯ ಜನತಾ ಪಕ್ಷ (ಬಿಜೆಪಿ) ಮೈತ್ರಿಕೂಟದ ನೇತೃತ್ವ.

ಭಾರತ್ ಧರ್ಮ ಜನ ಸೇನೆ (ಬಿಡಿಜೆಎಸ್) – ಪ್ರಬಲ ಸಮುದಾಯದ ಬೆಂಬಲ ಹೊಂದಿರುವ ಪಕ್ಷ.

ಟ್ವೆಂಟಿ20 ಪಾರ್ಟಿ ಜನಾತಿಪತಿಯ ಸಂರಕ್ಷಣಾ ಸಮಿತಿ (ಜೆಎಸ್ಎಸ್).

ಕೇರಳ ಕಾಮರಾಜ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ (AIADMK).

ಚುನಾವಣಾ ವೇಳಾಪಟ್ಟಿ ಕೇರಳ ವಿಧಾನಸಭೆಯ ಒಟ್ಟು 140 ಸ್ಥಾನಗಳಿಗೆ ಏಪ್ರಿಲ್ 9 ರಂದು ಮತದಾನ ನಡೆಯಲಿದೆ. ಈ ಚುನಾವಣೆಯು ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ನಿರೀಕ್ಷೆಯಿದೆ. ಚುನಾವಣಾ ಫಲಿತಾಂಶಗಳು ಮೇ 4 ರಂದು ಪ್ರಕಟವಾಗಲಿವೆ

[t4b-ticker]
error: Content is protected !!