ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಭಾರತ ಅಂತ್ಯವಾಡಬಹುದು: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Picture of Savistara

Savistara

Bureau Report

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕೆಭಾರತ ಅಂತ್ಯವಾಡಬಹುದು. ಯುದ್ಧವನ್ನು ನಿಲ್ಲಿಸಲು ಭಾರತ ಸಮರ್ಥವಾಗಿದೆ ಎಂದು ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.ನಾಗುರದಲ್ಲಿ ಸಭೆಯಲ್ಲಿ ಮಾತನಾಡಿದ ಮೋಹನ್ ಭಾಗವತ್, ಶಾಂತಿಯನ್ನು ಉತ್ತೇಜಿಸುವಲ್ಲಿ ಭಾರತದ ಪಾತ್ರವನ್ನು ವಿಶ್ವದ ವಿವಿಧ ದೇಶಗಳು ಗುರುತಿಸುತ್ತಿವೆ. ಪ್ರಸಕ್ತವಾಗಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಭಾರತ ಸಮರ್ಥವಾಗಿದೆ ಎಂದು ಹಲವು ದೇಶಗಳು ಹೇಳುತ್ತಿವೆ ಎಂದು ಹೇಳಿದ್ದಾರೆ.ಈ ಸಂದರ್ಭದಲ್ಲಿ ಅವರು ಜಾಗತಿಕ ಸಂಘರ್ಷಗಳ ಮೂಲ ಕಾರಣಗಳ ಬಗ್ಗೆ ಚರ್ಚಿಸಿ, ಸೌಹಾರ್ದತೆ ಕಡೆಗೆ ಬದಲಾವಣೆ ಅಗತ್ಯವಿದೆ ಎಂದು ಹೇಳಿದರು. ವಿಶ್ವದಾದ್ಯಂತ ನಡೆಯುತ್ತಿರುವ ಯುದ್ಧಗಳಿಗೆ ಸ್ವಾರ್ಥಪರ ಹಿತಾಸಕ್ತಿ ಮತ್ತು ಪ್ರಭುತ್ವ ಸಾಧಿಸುವ ಆಸೆಯೇ ಪ್ರಮುಖ ಕಾರಣಗಳಾಗಿವೆ. ಯುದ್ಧವು ಸ್ವಾರ್ಥ ಹಿತಾಸಕ್ತಿಯ ಪರಿಣಾಮವಾಗಿದೆ. ಜಗತ್ತಿಗೆ ಸಾಮರಸ್ಯ ಬೇಕು, ಸಂಘರ್ಷವಲ್ಲ ಎಂದು ಮೋಹನ್ ಭಾಗವತ್ ಹೇಳಿದರು.

[t4b-ticker]
error: Content is protected !!