ಸುಳ್ಯ:ರಾಜ್ಯಾದ್ಯಂತ ಗೋವು ಮತ್ತು ಮಹತ್ವ ತಿಳಿಸುವ ರಥಯಾತ್ರೆ ನಾಳೆ ಸಂಜೆ 4.30 ಸುಳ್ಯಕ್ಕೆ ಅಗಮಿಸಲಿದೆ.

ಗೋ ಸೇವಾ ಗತಿ ವಿಧಿ ಮತ್ತು ರಾಧ ಸುರಭಿ ಗೋ ಮಂದಿರ,ರಾಷ್ಟ್ರೀಯ ಗೋ ಸೇವಾ ಸಂಸ್ಥಾನದ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದ್ದು ಭವ್ಯವಾದ ಶೋಭಾ ಯಾತ್ರೆ,ಕುಣಿತ ಭಜನೆ ಮೂಲಕ ಸ್ವಾಗತಿಸಲಿದ್ದು,

ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಭಕ್ತಿ ಭೂಷಣ್ ದಾಸ್ ಅಧ್ಯಕ್ಷರು ರಾಷ್ಟ್ರೀಯ ಗೋವು ಸಂಸ್ಥಾನ ಟ್ರಸ್ಟ್ ಮತ್ತು ಆದರ್ಶ ಕೃಷಿಕರು, ಶಾಸಕರಾದ ರಾಜೇಶ್ ನಾಯ್ಕ್ ರು ಭಾಗವಹಿಸಲಿದ್ದಾರೆ.ಈ ವೇಳೆ ಗೋವು ಪ್ರೇಮಿಗಳಿಗೆ ನಂದಿ ಗೆ ಪೂಜೆ ಮಾಡುವ ಅವಕಾಶ ಕಲ್ಪಿಸಲಾಗಿದ್ದು ಪ್ರಸ್ತುತ ಕಾಲದಲ್ಲಿ ಗೋವು ಸಾಕಾಣಿಕೆ ಮತ್ತು ಮಹತ್ವ ದ ಬಗ್ಗೆ ಸಮಾಜದಲ್ಲಿ ಜಾಗೃತಿಗೊಳಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗೋವು ಪ್ರೇಮಿಗಳು,ಸಮಾಜ ಬಂಧುಗಳು ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.













































