ವಾಂಗ್ಚೂಕ್ ಆಸ್ಪತ್ರೆಗೆ, ಹೋರಾಟಕ್ಕೆ ಹೊಸ ಮುಖ: ಉಪವಾಸದ ಹೊಣೆ ಹೊತ್ತ ಜಿರಳೆ ಪಾರ್ಟಿ ಸಂಸ್ಥಾಪಕ

Picture of Savistara

Savistara

Bureau Report

ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಲುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ, ಪ್ರತಿಭಟನೆಗೆ ಹೊಸ ತಿರುವು ಸಿಕ್ಕಿದೆ.ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪೈ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಿ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ವಾಂಗ್ಟುಕ್ ಆಸ್ಪತ್ರೆಗೆ

20 ದಿನಗಳಿಂದ ಉಪವಾಸ ನಡೆಸುತ್ತಿದ್ದ ಸೋನಂ ವಾಂಗ್ಟುಕ್ ಅವರನ್ನು ಆರೋಗ್ಯ ಹದಗೆಟ್ಟ ಕಾರಣ ವೈದ್ಯರ ಸಲಹೆ ಮತ್ತು ನ್ಯಾಯಾಲಯದ ನಿರ್ದೇಶನದಂತೆ ದೆಹಲಿಯ ಸಫರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಭಿಜೀತ್ ದೀಪೈ, ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೇಳಿ ಅನಿರ್ದಿಷ್ಟಾವಧಿಯ ಉಪವಾಸ ಆರಂಭಿಸಿದ್ದಾರೆ.

‘ಚಲೋ ಸಂಸದ್’ ಮೆರವಣಿಗೆ ಯಥಾ

ಪ್ರಕಾರಜುಲೈ 20ರಂದು ನಿಗದಿಯಾಗಿರುವ ‘ಚಲೋ ಸಂಸದ್’ ಮೆರವಣಿಗೆ ಯಾವುದೇ ಬದಲಾವಣೆ ಇಲ್ಲದೆ ನಡೆಯಲಿದೆ ಎಂದು ಪ್ರತಿಭಟನಾ ಸಂಘಟನೆ ಸ್ಪಷ್ಟಪಡಿಸಿದೆ.ವಾಂಗ್ಟುಕ್ ಅವರಿಗೆ ಬೆಂಬಲವಾಗಿ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಸೇರಿದ್ದು, ಮುಂದಿನ ದಿನಗಳಲ್ಲಿ ಚಳುವಳಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

[t4b-ticker]
error: Content is protected !!