ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂದಿಸಿ ವಿಶ್ವ ಹಿಂದೂ ಪರಿಷತ್ ಬಂದ್ ಕರೆ ನೀಡಿದ್ದು, ಸುಳ್ಯದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.ಸಂಜೆ 6 ಗಂಟೆವರೆಗೆ ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ನಾಯಕರು ವಿನಂತಿಸಿದ್ದಾರೆ.

ವಿಶ್ವಹಿಂದೂ ಪರಿಷತ್ ನಾಯಕ ಸೋಮಶೇಖರ ಪೈಕ, ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಹರೀಶ್ ಕಂಜಿಪಿಲಿ,ಪ್ರಸನ್ನ ದರ್ಬೆ,ಕುಸುಮಾಧಾರ ಎ.ಟಿ.ಶ್ರೀಕಾಂತ್ ಮಾವಿನಕಟ್ಟೆ,ಹರಿಪ್ರಸಾದ್ ಎಲಿಮಲೆ, ರಜತ್ ಅಡ್ಕಾರು,ಸುನಿಲ್ ಕೇರ್ಪಳ, ಹಿಂದೂ ಕಾರ್ಯಕರ್ತರು ಗಾಂಧಿ ನಗರದಿಂದ ಹಳೆಗೇಟು ತನಕ ಕಾಲ್ನಡಿಗೆಯಲ್ಲಿ ಸಾಗಿ, ಬಾಗಿಲು ತೆರೆದಿದ್ದ ಅಂಗಡಿಯವರಲ್ಲಿ 6 ಗಂಟೆ ತನಕ ಬಂದ್ ಮಾಡುವಂತೆ ಕೇಳಿಕೊಂಡರು.












































