
ಹಿಂದೂ ದೇವಸ್ಥಾನ ಹಿಂದೂ ಸಮಾಜದ ಸೊತ್ತುವಾಗಿದ್ದು ಅದೂ ಯಾವತ್ತೂ ಮಠದ ವಶವಾಗರದು, ಕುಕ್ಕೆ ದೇವಸ್ಥಾನ ಮಠಕ್ಕೆ ಸೇರಬೇಕೆಂದು ಅಲ್ಲಿನ ಖಾಸಗಿ ಮಠವೊಂದು ಈ ಹಿಂದೆ ಸಮಿತಿ ಮೇಲೆ ದೂರು ದಾಖಲಿಸಿತ್ತು ಅಲ್ಲದೆ ಸುಮಾರು 55 ಕೇಸ್ ದೇವಸ್ಥಾನ ಮೇಲೆ ದಾವೆ ಹೂಡಿದರೆಂದು ಕುಕ್ಕೆ ದೇವಸ್ಥಾನ ಟ್ರಸ್ಟಿ ಮಹೇಶ್ ಭಟ್ ಕರಿಕ್ಕಳ ತಿಳಿಸಿದ್ದಾರೆ. ಈ ಹಿಂದೆ ದೇವಸ್ಥಾನ ಅಭಿವೃದ್ಧಿ ಸಂದರ್ಭ ಎಲ್ಲರಿಗೂ ಪರಿಹಾರ ಧನ ನೀಡಲಾಗಿತ್ತು ಆದರೆ ಮಠ ಮಾತ್ರ ನೀಡಿದ ಸುಮಾರು 5 ಕೋಟಿ ಪರಿಹಾರ ಧನವನ್ನು ತೆಗೆದುಕೊಂಡಿಲ್ಲ ಸೂಕ್ತವಾದ ದಾಖಲೆ ಅವರಲ್ಲಿಲ್ಲವೇ? ಭೂಮಿಯ ಒಡೆತನವಿದ್ದರೆ ಇಷ್ಟು ವರ್ಷ ಗಳ ಕಾಲ ಯಾಕೆ ಪರಿಹಾರ ತೆಗೆದುಕೊಂಡಿಲ್ಲ ವೆಂದು ಪ್ರಶ್ನಿಸಿದ್ದಾರೆ.ದೇವಸ್ಥಾನ ಒಳಗಿದ್ದ ಗಣಪತಿ ವಿಗ್ರಹವನ್ನು ತೆಗೆದು ಒಳಗಿಟ್ಟು ನರಸಿಂಹ ದೇವರನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಕುಕ್ಕೆ ಶೈವ ದೇವಸ್ಥಾನ ಆ ಪರಂಪರೆಯ ಮೂಲಕ ನಡೆಯಬೇಕೆಂದು ಮಹೇಶ್ ಭಟ್ ಕರಿಕ್ಕಳ ತಿಳಿಸಿದ್ದಾರೆ













































