ತಮಿಳುನಾಡು ರೈತರಿಗೆ ಸಾಲ ಮನ್ನಾ ಭಾಗ್ಯ: ಸಿಎಂ ಸಿ.ಜೋಸೆಫ್ ವಿಜಯ್ ಮಹತ್ವದ ಘೋಷಣೆ

Picture of Savistara

Savistara

Bureau Report

ತಮಿಳುನಾಡು ಸರ್ಕಾರವು ರಾಜ್ಯದ ಅನ್ನದಾತರಿಗೆ ಭರ್ಜರಿ ದೀಪಾವಳಿ ಸೌಗಾತ ನೀಡಿದೆ. ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್ ಅವರು ರೈತರ ಹಿತದೃಷ್ಟಿಯಿಂದ ಬೃಹತ್ ಕೊಡುಗೆಯೊಂದನ್ನು ಪ್ರಕಟಿಸಿದ್ದು, ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

75,000 ರೂಪಾಯಿ ವರೆಗಿನ ಬೆಳೆ ಸಾಲ ಮನ್ನಾ

ರಾಜ್ಯದ ವಿವಿಧ ಸಹಕಾರಿ ಬ್ಯಾಂಕುಗಳ ಮೂಲಕ ರೈತರು ಪಡೆದುಕೊಂಡಿರುವ ಕೃಷಿ ಸಾಲದ ಹೊರೆ ಇಳಿಸಲು ಸಿಎಂ ವಿಜಯ್ ಮುಂದಾಗಿದ್ದಾರೆ. ಗರಿಷ್ಠ 75,000 ರೂಪಾಯಿಗಳವರೆಗಿನ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.

ಸಹಕಾರಿ ಬ್ಯಾಂಕ್‌ ಗ್ರಾಹಕರಿಗೆ ನೇರ ಲಾಭ

ಪ್ರಮುಖ ಮಾಹಿತಿ: ಈ ಸಾಲ ಮನ್ನಾ ಯೋಜನೆಯು ಕೇವಲ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದ ಅರ್ಹ ರೈತರಿಗೆ ಮಾತ್ರ ಅನ್ವಯಿಸಲಿದೆ.ಕಳೆದ ಕೆಲವು ದಿನಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ತಮಿಳುನಾಡಿನ ಲಕ್ಷಾಂತರ ರೈತ ಕುಟುಂಬಗಳಿಗೆ ಸರ್ಕಾರದ ಈ ನಿರ್ಧಾರವು ದೊಡ್ಡ ಆಸರೆಯಾಗಿದೆ. ಬೆಳೆ ನಷ್ಟ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಕಂಗಾಲಾಗಿದ್ದ ಕೃಷಿಕರ ನೆರವಿಗೆ ಧಾವಿಸಿರುವ ಮುಖ್ಯಮಂತ್ರಿಗಳ ಈ ಜನಪರ ನಿರ್ಧಾರಕ್ಕೆ ರಾಜ್ಯಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಸಾಲ ಮುಕ್ತರಾಗಲಿರುವ ರೈತರು ಇನ್ಮುಂದೆ ಹೊಸ ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!