ಸರ್ಕಾರ ದುರಾಡಳಿತ, ಜನ ವಿರೋಧಿ ನೀತಿ ಖಂಡಿಸಿ ಗುರುಪುರ ಪಂಚಾಯತ್ ಬಳಿ ಪ್ರತಿಭಟನೆ | ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಹೊರೆಯಾಗಿದೆ ಸಂಸದ ಕ್ಯಾ ಬ್ರಿಜೇಶ್ ಚೌಟ

Picture of Savistara

Savistara

Bureau Report

ಗುರುಪುರ:ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ,ಅನುದಾನದ ಕೊರತೆಯಿಂದ ಯಾವುದೇ ಅಭಿವೃದ್ಧಿ ಕಾರ್ಯ ಪಂಚಾಯತ್ ಮಟ್ಟದಲ್ಲಿ ನಡೆಯುತ್ತಿಲ್ಲ,ಬಿಜೆಪಿ ಸರ್ಕಾರ ಅವಧಿಯಲ್ಲಿನ ಅನೇಕ ಯೋಜನೆಗಳಿಗೆ ಹಣ ಬಿಡುಗಡೆಯಾಗದೆ ಫಲಾನುಭವಿಗಳಿಗೆ ಸಮಸ್ಯೆಯಾಗಿದೆ ಯೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಗುರುಪುರ ಪಂಚಾಯತ್ ಬಳಿ ರಾಜ್ಯ ಸರ್ಕಾರ ವೈಫಲ್ಯ ವಿರೋಧಿಸಿ ನಡೆದ ಸಭೆಯಲ್ಲಿ ಭಾಗವಹಿಸಿದ ಸಂಸದರು ಕರಾವಳಿ ಜಿಲ್ಲೆ ಬಗ್ಗೆ ಕೂಡ ತಾತ್ಸಾರ ಭಾವ ವನ್ನು ರಾಜ್ಯ ಸರ್ಕಾರ ತೋರುತ್ತಿದೆ ಇಲ್ಲಿನ ಸಂಸ್ಕೃತಿ,ಜೀವನ ಪದ್ದತಿ,ಆಚಾರ ವಿಚಾರ ಗಳ ಎಲ್ಲಾ ರೀತಿಯಲ್ಲೂ ಕರಾವಳಿ ಯನ್ನು ಟಾರ್ಗೆಟ್ ಮಾಡುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆಯೆಂದು ಚೌಟ ವಾಗ್ದಾಳಿ ನಡೆಸಿದರು.ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರು,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

[t4b-ticker]
error: Content is protected !!