ಐವರ್ನಾಡು:ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಜನ ವಿರೋಧಿ ನೀತಿ ಅನುಸರಿಸುತ್ತಿಯೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಐವರ್ನಾಡು ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಬಿಜೆಪಿ ಪ್ರಮುಖರಾದ ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಶ್ರೀನಿವಾಸ ಮಡ್ತಿಲ,ಮೋಹನ್ ಬೋಳುಗುಡ್ಡೆ,ನವೀನ್ ಸಾರಕೆರೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಶಕ್ತಿ ಕೇಂದ್ರ ಪ್ರಮುಖ್ ನಂದಕುಮಾರ್ ಬಾರೆತ್ತಡ್ಕ,ಬೆಳ್ಳಾರೆ ಮಹಾಶಕ್ತಿ ಕೇಂದ್ರ ಸದಸ್ಯ ಕಿಶನ್ ಜಬಳೆ,ಶ್ರೀನಿವಾಸ್ ಮಡ್ತಿಲ,ದೇವಿದಾಸ್ ಕತ್ಲಡ್ಕ,

ಗಣೇಶ್ ಕೊಚ್ಚಿ, ಬಾಲಚಂದ್ರ ಗೌಡ,ಅನಿಲ್ ದೇರಾಜೆ,ರೇವತಿ ಬೊಳುಗುಡ್ಡೆ,ಗಣೇಶ್ ಬಜಂತಡ್ಕ,ರಂಜಿತ್ ಮೂಲೆತೋಟ,ರಕ್ಷಿತ್ ಸಾರಕೂಟೇಲ್,ರೇಣುಕಾ ಚಾಕೋಟೆ, ಪಂಚಾಯತ್ ಸದಸ್ಯೆ ಶ್ರೀಮತಿ ನಳಿನಿ ಕೊಡ್ತಿಲು,ಭವಾನಿಶಂಕರ ಪೂಜಾರಿಮನೆ,ಜಗದೀಶ್ ಕೋಲ್ಚರ್ ಉಪಸ್ಥಿತರಿದ್ದರು.

ಕಿಶನ್ ಜಬಳೆ ಕಾರ್ಯಕ್ರಮ ನಿರೂಪಿಸಿ,ನಂದಕುಮಾರ್ ಬಾರೆತ್ತಡ್ಕ ಧನ್ಯವಾದ ಸಲ್ಲಿಸಿದರು, ಶಿವಕುಮಾರ್ ಬಾಂಜಿಕೊಡಿ ಮನವಿ ಪತ್ರ ವಾಚಿಸಿದರು.













































