ಅಭಿನಂದನ್ ಸೆರೆಹಿಡಿದ ಪಾಕ್ ಅಧಿಕಾರಿ ಉಗ್ರರ ಗುಂಡಿಗೆ ಬಲಿ

Picture of Savistara

Savistara

Bureau Report

ಇಸ್ಲಮಾಬಾದ್‌: ಭಾರತೀಯ ವಾಯುಪಡೆ ಪೈಲಟ್

ಅಭಿನಂದನ್ ವರ್ಧಮಾನ್ ಅವರನ್ನು 2019ರಲ್ಲಿ ಸೆರೆ ಹಿಡಿದಿದ್ದ ಪಾಕಿಸ್ತಾನಿ ಅಧಿಕಾರಿ ಮೇಜರ್ ಮೊಯಿಜ್ ಅಬ್ಬಾಸ್ ಶಾ ಇದೀಗ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಖೈಬ‌ರ್ ಪಣ್ಡುನ್ಹಾ ಪ್ರಾಂಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಸುನೀಗಿದ್ದಾರೆ.

ತೆಪ್ರೆಕ್ ಎ ತಾಲಿಬಾನ್ ಪಾಕಿಸ್ತಾನ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಬಲಿಯಾಗಿದ್ದಾರೆ. ಅವರಲ್ಲಿ ಒಬ್ಬರು ಅಬ್ಬಾಸ್ ಶಾ.

ದಕ್ಷಿಣ ವಜೀರಿಸ್ತಾನ ಜಿಲ್ಲೆಯಲ್ಲಿ ನಡೆದ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ (ಐಬಿಒ) ಭದ್ರತಾ ಪಡೆಗಳು 11 ಭಾರತೀಯ ಪ್ರಾಯೋಜಿತ ಭಯೋತ್ಪಾದಕರನ್ನು ಕೊಂದರೆ, ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಪಾಕಿಸ್ತಾನಿ ಸೇನೆ ಮಂಗಳವಾರ (ಜೂ.24) ಹೇಳಿಕೆಯಲ್ಲಿ ತಿಳಿಸಿದೆ.

ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಜೊತೆಗೆ 11 ಟಿಟಿಪಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.ಪುಲ್ವಾಮಾ ದಾಳಿಯ ಹನ್ನೆರಡು ದಿನಗಳ ನಂತರ ಅಂದರೆ ಫೆಬ್ರವರಿ 26 ರಂದು ಪಾಕಿಸ್ತಾನದ ಖೈಬ‌ರ್ ಪಸ್ತುನ್ಮಾ ಪ್ರಾಂತ್ಯದ ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಾರತ ದಾಳಿ ಮಾಡಿತ್ತು. ಆಗ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ಧಮಾನ್, ಶ್ರೀನಗರ ಮೂಲದ 51 ಸ್ಕ್ಯಾಡ್ರನ್‌ನ ಭಾರತೀಯ ಪುಶ್‌ಬ್ಯಾಕ್ ತಂಡದ ಭಾಗವಾಗಿದ್ದರು.

[t4b-ticker]
error: Content is protected !!