
ಸುಳ್ಯ:1975 ನೆ ಇಸವಿ ಜೂನ್ 25 ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ,ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಿತ್ತು ಈ ವಿಚಾರವಾಗಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ ಸಂಘದ ಹಿರಿಯ ಕಾರ್ಯಕರ್ತರು ಕುಮಾರಸ್ವಾಮಿ ಅಲೆಟ್ಟಿ ಭೇಟಿಯಾಗಿ ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭ ದಲ್ಲಿ ಆ ದಿನಗಳ ಘಟನೆಯ ಬಗ್ಗೆ ಅನುಭವ ಹಂಚಿಕೊಂಡರು . ಹಿರಿಯ ಕಾರ್ಯಕರ್ತ ಕಿಟ್ಟಣ್ಣ ರೈ ಇರಂತ ಮಜಲು, ನಯನ ರೈ ಮೇನಾಲ, ಬಿ ಜೆ ಪಿ ಬೂತ್ ಸಮಿತಿ ಅಧ್ಯಕ್ಷರು ಶ್ರೀ ಚಿದಾನಂದ ಪೂಜಾರಿ ಇರಂತ ಮಜಲು, ಅಜ್ಜಾವರ ಬಿ ಜೆ ಪಿ ಶಕ್ತಿ ಕೇಂದ್ರ ಅಧ್ಯಕ್ಷರು ರಾಜೇಶ್ ಮೇನಾಲ ಮತ್ತು ಕುಮಾರ ಸ್ವಾಮಿ ಸಹೋದರ ಉಪಸ್ಥಿತರಿದ್ದರು.













































