
ಸುಳ್ಯ ತಾಲೂಕು ಕೃಷಿಕ ಸಮಾಜದ ತ್ರೈ ಮಾಸಿಕ ಸಭೆ ಅಧ್ಯಕ್ಷರಾದ ಎ. ಟಿ.ಕುಸುಮಾಧರ ನೇತೃತ್ವದಲ್ಲಿ ಕೃಷಿಕ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಎಡಿಐ ಗುರುಪ್ರಸಾದ್ ಸ್ವಾಗತಿಸಿ ಈ ವರ್ಷದ ಕೃಷಿ ಬೆಳವಣಿಗೆ ಮತ್ತು ಭತ್ತ ಕೃಷಿ ಗೆ ಪ್ರೋತ್ಸಾಹ,ಬಿತ್ತನೆ ಬೀಜ ಬಗ್ಗೆ ಮಾಹಿತಿ ಹಂಚಿಕೊಂಡರು ಈ ವೇಳೆ ಕೃಷಿಕ ಸಮಾಜ ಸ್ವಂತ ಕಟ್ಟಡಕ್ಕೆ ಎಪಿಯಂಸಿ ಮತ್ತು ತಹಿಶಿಲ್ದಾರ್ ರಿಗೆ ಮನವಿ ನೀಡಲು ನಿರ್ಧರಿಸಲಾಗಿದ್ದು ತೋಟಗಾರಿಕಾ ಇಲಾಖೆ,ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಕೃಷಿಕ ಸಮಾಜದ ಕುಸುಮಾಧರ ಎ. ಟಿ, ಚಂದ್ರಾ ಕೋಲ್ಚರ್, ಅಣ್ಣಾಜಿ ಗೌಡ,ಕುಮಾರಸ್ವಾಮಿ,ರುಕ್ಮಯ್ಯ ಗೌಡ,ಮನ್ಮಥ ಎ. ಯಸ್, ಸವಿನ್ ಕೊಡಪಾಲ,ಉಮಾನಾಥ ಪಟೇಲ್ ಮನೆ,ಸುಧಾಕರ ಪ್ರಭು ಮೊದಲಾದವರು ಉಪಸ್ಥಿತರಿದ್ದರು













































