ಸಂಸದ ಕ್ಯಾ.ಬ್ರಿಜೇಶ್ ಚೌಟ ಪ್ರಯತ್ನ

Picture of Savistara

Savistara

Bureau Report

ಬಹುಕಾಲದ ಬೇಡಿಕೆಯಾಗಿದ್ದ ಉತ್ತರ ಕರ್ನಾಟಕ ಮತ್ತು ಕರಾವಳಿ ಸಂಪರ್ಕಿಸುವ ಏಕೈಕ ರೈಲು ವಿಜಯಪುರ-ಮಂಗಳೂರು ರೈಲು ಸಂಚಾರವನ್ನು ಖಾಯಂಗೊಳಿಸಲಾಗಿದೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲು ನಿಜಕ್ಕೂ ಸಂತಸವಾಗುತ್ತಿದೆ. ರೈಲಿನ ನಿಯಮಿತ ಸಂಚಾರದ ಮೂಲಕ ದೀರ್ಘಕಾಲದ ಎರಡೂ ಪ್ರದೇಶದ ಬೇಡಿಕೆ ಈಗ ಈಡೇರಿದಂತಾಗಿದೆ. ಜೊತೆಗೆ ಎರಡು ನಗರಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಬಹುದೊಡ್ಡ ನಿರಾಳತೆ ದೊರಕಿದೆ.

ಉತ್ತರ ಕರ್ನಾಟಕದಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ, ಕರಾವಳಿ ಭಾಗದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ಹಾಗೂ ನಿಯಮಿತವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದರಿಂದಾಗಿ ಅನುಕೂಲವಾಗಲಿದೆ.

[t4b-ticker]
error: Content is protected !!