ಸಿರಿಬಾಗಿಲು ಗ್ರಾಮದ ಗುಂಡ್ಯದಲ್ಲಿ ಜು 03 ರಂದು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೆ ಕಾರ್ಯವನ್ನು ನಡೆಸುವ ಸಂದರ್ಭದಲ್ಲಿ ಸರ್ವೆ ನಡೆಸುವ ಸರ್ವೆ ನಂಬರಿನ ರೈತರಿಗೆ ಪಂಚಾಯತ್ ಅಧ್ಯಕ್ಷರಿಗೆ ಆ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಂಟಿ ಸರ್ವೆ ನಡೆಸಬೇಕೆಂದು ಮಲೆನಾಡು ಹಿತರಕ್ಷಣ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ರವರು ಆಗ್ರಹಿಸಿದರು. ಅನೇಕ ಪ್ರಶ್ನೆಗಳನ್ನು ಕೇಳಲಾಗಿದ್ದು ಪ್ರಶ್ನೆಗಳಿಗೆ ಇಲಾಖಾಧಿಕಾರಿಗಳು ಸಮರ್ಪಕವಾಗಿ ಉತ್ತರಿಸಲು ವಿಫಲರಾದರು. ಮತ್ತು ಮುಂದಿನ ಹಂತಗಳಲ್ಲಿ ನಕಾಶೆ ಮತ್ತು ತತ್ಸಂಬಂಧಿ ಇಲಾಖೆಯ ವರದಿಗಳನ್ನು ಸಾರ್ವಜನಿಕರ ಮುಂದಿಟ್ಟು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು ಮತ್ತು ಸರ್ವೆ ಕಾರ್ಯವನ್ನು ಮಾಡಲು ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಪ್ರಮುಖರಾದ ಕಿಶೋರ್ ಶಿರಾಡಿ ,ದಾಮೋದರ್ ಗುಂಡ್ಯಾ ಪ್ರಕಾಶ್ ಗುಂಡ್ಯ ಮತ್ತಿತರರು ಉಪಸ್ಥಿತರಿದ್ದರು.
ಸಿರಿಬಾಗಿಲು ಗ್ರಾಮ ಗುಂಡ್ಯ ತೋಟ ಕಂದಾಯ ಇಲಾಖೆ ಸರ್ವೇ ಕಾರ್ಯ |ರೈತರು,ಪಂಚಾಯತ್ ಅಧ್ಯಕ್ಷರು, ಶಾಸಕರ ಗಮನಕ್ಕೆ ತಂದು ಜಂಟಿ ಸರ್ವೇ ನಡೆಸುವಂತೆ ಕಿಶೋರ್ ಶಿರಾಡಿ ಒತ್ತಾಯ
Savistara
Bureau Report
[t4b-ticker]














































