
ಅಂಬಾರಗೋಡ್ಲು-ಕಳಸವಳ್ಳಿ ಸಂಪರ್ಕಿಸುವ ಕೇಬಲ್ ಸೇತುವೆ, ಬೀದರ್ – ಹುಮ್ನಾಬಾದ್ ನಡುವೆ 2/4 ಪಥ ರಸ್ತೆ, ಭಾನಾಪುರ – ಗದ್ದನಕೇರಿ ನಡುವೆ 2 ಪಥ ರಸ್ತೆ, ಕಲಬುರಗಿ-ಯಾದಗಿರಿ ನಡುವಿನ 4 ಪಥ ರಸ್ತೆ ಮೇಲ್ಸೇತುವೆ ಮತ್ತು 2 ಪಥ ಬೃಹತ್ ಸೇತುವೆ, ಮಾಣಿ- ಸಂಪಾಜೆ ನಡುವೆ 7 ಕಿರು ಸೇತುವೆ, ಶಿರಾಡಿ ಘಾಟ್ನಲ್ಲಿ ಶಾಶ್ವತ ರಸ್ತೆಯ ಪುನರ್ರಚನೆ ಕಾಮಗಾರಿ,ಬೆಂಗಳೂರು- ಮೈಸೂರು ಹೆದ್ದಾರಿಗೆ ಪ್ರವೇಶ ಮತ್ತು ನಿರ್ಗಮನ (ನಿರ್ಮಾಣ ಸೇರಿದಂತೆ 712 ಕೋಟಿ ಹೆಚ್ಚುವರಿ ಕಾಮಗಾರಿ ಮತ್ತು ಕುಶಾಲನಗರದಿಂದ ಸಂಪಾಜೆವರೆಗೂ 94 ಕೋಟಿ ವೆಚ್ಚದ ತಡೆಗೋಡೆ (Retaining Walls) ನಿರ್ಮಾಣ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ,ಸಂಸದ ಬಿ.ವೈ ರಾಘವೇಂದ್ರ,ಕ್ಯಾ ಬ್ರಿಜೇಶ್ ಚೌಟ,ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉಪಸ್ಥಿತರಿದ್ದರು.














































