ಸಿಎಂ ಸ್ಟಾಲಿನ್ ಜತೆ ವಾಯು ವಿಹಾರ!.. ಮಾಜಿ ಸಿಎಂ ಬಣ ದಳಪತಿ ವಿಜಯ್ ಪಕ್ಷಕ್ಕೆ?
ಚೆನ್ನೈ: ಎನ್ ಡಿಎ ಜತೆ ಗುರುತಿಸಿಕೊಂಡಿದ್ದ ತಮಿಳು ನಾಡು ಮಾಜಿ ಸಿಎಂ ಓ ಪನ್ನೀರ್ ಸೆಲ್ವಂ ಮೈತ್ರಿಕೂಟ ತೊರೆದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೊಂದಿಗೆ ಪನ್ನೀರ್ ಸೆಲ್ವಂ ಬೆಳಗಿನ ವಾಯುವಿಹಾರ ನಡೆಸಿದ ಬೆನ್ನಲ್ಲೇ ಈ ನಾಟಕೀಯ ರಾಜಕೀಯ ಬೆಳವಣಿಗೆ ನಡೆದಿದೆ.ಎಐಎಡಿಎಂಕೆ ಯಿಂದ ಉಚ್ಚಾಟಿಸಲ್ ಪಟ್ಟಿದ್ದ ನಾಯಕ ಪನ್ನೀರ್ಸೆಲ್ವಂ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ದಿಂದ ಹೊರಬರಲು ತನ್ನ ಬಣದ ನಿರ್ಧಾರವನ್ನು 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಪ್ರಕಟಿಸಿದ್ದಾರೆ.ಇತ್ತೀಚೆಗೆ ತಮಿಳುನಾಡಿನ ಗಂಗೈಕೊಂಡ ಚೋಳಪುರಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಅವರನ್ನು ಭೇಟಿಯಾಗುವುದು ತಮಗೆ “ಅದ್ವಿತೀಯ ಗೌರವ” ಎಂದು ಹೇಳಿ ಔಪಚಾರಿಕವಾಗಿ ಭೇಟಿಗೆ ಅವಕಾಶ ಕೋರಿದ್ದರು. ಆದಾಗ್ಯೂ, ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. ಈ ತಿರಸ್ಕಾರದ ನಂತರ, ಅವರು ಸರ್ವ ಶಿಕ್ಷಾ ಅಭಿಯಾನ (ಎಸ್ಎಸ್ಎ) ನಿಧಿಗಳನ್ನು ವಿತರಿಸುವಲ್ಲಿನ ವಿಳಂಬದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಸರಕಾರವನ್ನು ಸಾರ್ವಜನಿಕವಾಗಿ ಟೀಕಿಸಿದ್ದರು.ಮಾಜಿ ಸಚಿವ ಮತ್ತು ಪನ್ನೀರ್ ಸೆಲ್ವಂ ಅವರ ದೀರ್ಘಕಾಲದ ಆಪ್ತ ಪಸ್ರುತಿ ಎಸ್. ರಾಮಚಂದ್ರನ್ ಅವರು ಬಿಜೆಪಿ ನೇತೃತ್ವದ ಎನ್ಡಿಎ ಜತೆಗಿನ ಮೈತ್ರಿಯನ್ನು ಕೊನೆಗೊಳಿಸುತ್ತಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.
ಒಪಿಎಸ್ ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸಲಿದ್ದಾರೆ. ಪ್ರಸ್ತುತ, ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ. ಭವಿಷ್ಯದಲ್ಲಿ, ಚುನಾವಣೆ ಹತ್ತಿರದಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.ಪ್ರಖ್ಯಾತ ನಟ ವಿಜಯ್ ಅವರ ಹೊಸ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜತೆ ಸಂಭಾವ್ಯ ಮೈತ್ರಿಯ ಬಗ್ಗೆ ಕೇಳಿದಾಗ, “ಕೈಜೋಡಿಸುವ ಸಾಧ್ಯತೆಯನ್ನು ನಾನು ತಳ್ಳಿಹಾಕುವುದಿಲ್ಲ. ಕಾಲವೇ ಹೇಳುತ್ತದೆ, ಚುನಾವಣೆಗೆ ಇನ್ನೂ ಸಮಯವಿದೆ” ಎಂದು ಪಸ್ರುತಿ ಎಸ್. ರಾಮಚಂದ್ರನ್ ಹೇಳಿದ್ದಾರೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಮನಾಥಪುರ ಕ್ಷೇತ್ರದಿಂದ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಬೆಂಬಲದೋನಿಗೆ ಪಕ್ಷೇತರನಾಗಿ ಸ್ಪರ್ಧಿಸಿದ್ದ ಪನ್ನೀರ್ ಸೆಲ್ವಂ ಸೋಲು ಅನುಭವಿಸಿದ್ದರು. ಅವರು 30.86% ಮತಗಳನ್ನು ಪಡೆದಿದ್ದರು.











































