ಅಯೋಧ್ಯೆ ರಾಮ ಮಂದಿರ ದುರುಪಯೋಗ ವಿಚಾರ | ಖಡಕ್ ತೀರ್ಮಾನ ಕೈಗೊಂಡ ಯೋಗಿ ಸರ್ಕಾರ,ತನಿಖೆ ಮುಗಿಯುವರೆಗೆ ಟ್ರಸ್ಟ್ ಪದಾಧಿಕಾರಿ ಸಿಬ್ಬಂದಿ ಅಯೋಧ್ಯೆ ಯಲ್ಲಿ ಲಾಕ್ SIT ಸೂಚನೆ

Picture of Savistara

Savistara

Bureau Report

ಅಯೋಧ್ಯೆ: ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ನಿಧಿ ದುರುಪಯೋಗದ ಆರೋಪದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಮಂದಿರದ ಸಿಬ್ಬಂದಿಗಳಿಗೆ ಅನುಮತಿಯಿಲ್ಲದೆ ಅಯೋಧ್ಯೆಯನ್ನು ಬಿಟ್ಟು ಹೊರಹೋಗದಂತೆ ಎಸ್‌ಐಟಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮುಖ್ಯಮಂತ್ರಿಗೆ ದೈನಂದಿನ ವರದಿ:ಮೂರು ಸದಸ್ಯರ ಎಸ್‌ಐಟಿ ತಂಡವು ರವಿವಾರ ಲಖನೌಗೆ ತೆರಳುವ ಮುನ್ನ ಈ ಮಹತ್ವದ ನಿರ್ದೇಶನ ನೀಡಿದೆ. ಮೂಲಗಳ ಪ್ರಕಾರ, ಟ್ರಸ್ಟ್‌ನ ಅಧಿಕಾರಿಗಳ ವಿಚಾರಣೆಯ ವಿವರಗಳು ಮತ್ತು ತನಿಖೆಯ ಹಂತಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗುತ್ತಿದೆ. ಈ ದೈನಂದಿನ ವರದಿಗಳನ್ನು ನೇರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಗೆ ರವಾನಿಸಲಾಗುತ್ತಿದ್ದು. ಶೀಘ್ರದಲ್ಲೇ ಅಂತಿಮ ವರದಿಯನ್ನು ಸಿಎಂಗೆ ಹಸ್ತಾಂತರಿಸಲಾಗುವುದು.

ತನಿಖೆಯ ವ್ಯಾಪ್ತಿ:ಎಸ್‌ಐಟಿ ಕೇವಲ ನಿಧಿ ದುರುಪಯೋಗದ ಬಗ್ಗೆ ಮಾತ್ರವಲ್ಲದೆ, ದೇವಾಲಯಕ್ಕಾಗಿ ನಡೆಸಲಾದ ಭೂಮಿ ಖರೀದಿ ಮತ್ತು ಕಟ್ಟಡ ಸಾಮಗ್ರಿಗಳ ಖರೀದಿಯ ಬಗ್ಗೆಯೂ ತನಿಖೆ ನಡೆಸುತ್ತಿದೆ. ಟ್ರಸ್ಟ್‌ನವರು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ನೀಡಿ ಭೂಮಿ ಖರೀದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು ಸಮಾಜವಾದಿ ಪಕ್ಷ (SP) ಮತ್ತು ಆಮ್ ಆದ್ಮ ಪಕ್ಷಗಳು (AAP) ಪ್ರಬಲವಾಗಿ ಖಂಡಿಸಿವೆ.

ಹಿನ್ನೆಲೆ:ರಾಮಮಂದಿರಕ್ಕೆ ಹರಿದುಬಂದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸ್ವತಃ ಟ್ರಸ್ಟ್ ನೀಡಿದ ಮನವಿಯ ಮೇರೆಗೆ ಜೂನ್ 13ರಂದು ಉತ್ತರ ಪ್ರದೇಶ ಸರ್ಕಾರವು ಎಸ್‌ಐಟಿ ರಚಿಸಿತ್ತು.

ತನಿಖಾ ತಂಡದಲ್ಲಿರುವವರು:ಈ ವಿಶೇಷ ತಂಡದಲ್ಲಿ ಲಖನೌ ವಿಭಾಗೀಯ ಕಮಿಷನ‌ರ್ ವಿಜಯ್ ವಿಶ್ವಾಸ್‌ ಪಂತ್, ಐಜಿಪಿ ಕಿರಣ್ ಎಸ್. ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್‌ ಅವರು ಸದಸ್ಯರಾಗಿದ್ದು, ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.

[t4b-ticker]
error: Content is protected !!