ವಿಶ್ವಹಿಂದೂ ಪರಿಷದ್ ಸ್ಥಾಪನಾ ದಿನದ ಅಂಗವಾಗಿ ಸುಳ್ಯದಲ್ಲಿ ಅದ್ದೂರಿಯಾಗಿ ಆ.19 ನಡೆಯಲಿರುವ 12ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮವು ಕಲ್ಕುಡ ದೈವಸ್ಥಾನದಲ್ಲಿ ನಡೆಯಿತು.
ಪಿಕೆ ಉಮೇಶ್ ರವರು ಸ್ಟಿಕ್ಕರ್ ಬಿಡುಗಡೆ ಮಾಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಶ್ರೀಕಾಂತ್ ಗೋಳ್ವಲ್ಕರ್, ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಮೊಸರು ಕುಡಿಕೆ ಉತ್ಸವ ಸಮಿತಿಯ ಉಪಾಧ್ಯಕ್ಷರು ಸೋಮಶೇಖರ್ ಪೈಕ,ತಿಮ್ಮಪ್ಪ ನಾವೂರು,ವರ್ಷಿತ್ ಚೊಕ್ಕಾಡಿ,ದೇವಿಪ್ರಸಾದ್ ಅತ್ಯಾಡಿ, ಅಭಿಜಿತ್ ಸುಳ್ಯ,ಗಿರೀಶ್ ಕಲ್ಲಗದ್ದೆ, ನಿತೀಶ್ ಉಬರಡ್ಕ,ಮನೋಜ್ ಸುಳ್ಯ, ನಿರ್ದೇಶ್ ಸುಳ್ಳಿ, ರಾಜೇಶ್ ಕಲ್ಲುಮುಟ್ಟು,ಕಿರಣ್, ವಿನಯ,ನಂದನ್, ವಿನ್ಯಾಸ್, ಕೀರ್ತನ್,ಗಣೇಶ್ ಸೇರಿವೆ.











































