ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಮಠದಲ್ಲಿ ಸಿಬ್ಬಂದಿ ಮಂಗಳವಾರ ಹುಂಡಿ ತೆರೆದು 27 ದಿನಗಳ ಅವಧಿಯಲ್ಲಿ ಸಂಗ್ರವಾದ ಕಾಣಿಕೆ ಎಣಿಕೆ ಮಾಡಿದ್ದು, ₹3.50 ಕೋಟಿ ಕಾಣಿಕೆ ಬಂದಿದೆ.
ಭಕ್ತರಿಂದ ₹3,39,12,143 ನಗದು, ₹11,05,000 ನಾಣ್ಯಗಳು ಸೇರಿ ಒಟ್ಟು ₹3,50,17,143 ನಗದು ಕಾಣಿಕೆ ರೂಪದಲ್ಲಿ ಬಂದಿದೆ. 138 ಗ್ರಾಂ ಚಿನ್ನ ಹಾಗೂ 50 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ನೀಡಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.










































