ಬೆಳೆ ವಿಮೆ ಕಂತಿನ ಹಣ ಪಾವತಿಸಿದರೂ, ಬೆಳೆ ವಿಮೆ ಸರಿಯಾದ ರೀತಿಯಲ್ಲಿ ಜಮೆಯಾಗಿರುವುದಿಲ್ಲ. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ರೈತರ ಖಾತೆಗೆ ತಕ್ಷಣ ಪೂರ್ತಿ ಹಣ ನ್ಯಾಯಯುತವಾಗಿ ಪಾವತಿಯಾಗಬೇಕು. ಈ ನಿಟ್ಟಿನಲ್ಲಿ ಡಿಸೇಂಬರ್ 24 ಬುಧವಾರ ಬೆಳಿಗ್ಗೆ 11 ಗಂಟೆಗೆ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಕಿಶೋರ್ ಶೀರಾಡಿ ಸಂಚಾಲಕರು ಇವರ ನೇತೃತ್ವದಲ್ಲಿ ನಡೆಯುವ ಪಕ್ಷಾತೀತ, ಜಾತ್ಯಾತೀತ ರೈತರ ಬೃಹತ್ ‘ಪ್ರತಿಭಟನೆ ನಡೆಯಲಿದೆ ಯೆಂದುಶ್ರೀ ಡಿ. ಕೆ. ಅವಿನಾಶ್ ಯೂತ್ ಪ್ರಮುಖ್ ಸುಳ್ಯ ತಾಲೂಕು,ಶ್ರೀ ರಮಾನಂದ ಎಣ್ಣೆಮಜಲು ಜಿಲ್ಲಾ ಸಂಪರ್ಕ ಪ್ರಮುಖ್ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಮತ್ತು ಸರ್ವಸದಸ್ಯರು, ಪದಾಧಿಕಾರಿಗಳು ಹಾಗೂ ಜಿಲ್ಲಾ ಸಮಿತಿಶ್ರೀ ಹೂವಪ್ಪ ಸಂಪ್ಯಾಡಿ-ಕೊಲ್ಲಮೊಗ್ರಸುಳ್ಯ ತಾಲೂಕು ಸಂಪರ್ಕ ಪ್ರಮುಖ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಬೆಳೆ ವಿಮೆ ಹಣ ತಾರತಮ್ಯ ವಿಚಾರ | ಡಿಸೆಂಬರ್ 24 ಬುಧವಾರ ಸುಳ್ಯದಲ್ಲಿ ರೈತರಿಂದ ಪ್ರತಿಭಟನೆ
Savistara
Bureau Report
[t4b-ticker]













































