ಪುತ್ತೂರು ಸರ್ವೆ ಗ್ರಾಮದ ಜಾತ್ರೋತ್ಸವ ಪ್ರಯುಕ್ತ ಅಳವಡಿಸಲಾಗಿದ್ದ ಭಗವಧ್ವಜ ತೆರವು ಹಾಗೂ ಸುಳ್ಳು ಕೇಸ್ ದಾಖಲು ಪ್ರಕರಣ- ಸರ್ವೆಯಲ್ಲಿ ಖಂಡನಾ ಸಭೆ

Picture of Savistara

Savistara

Bureau Report

ಸರ್ವೆ ಗ್ರಾಮ ದೇವರ ಜಾತ್ರೋತ್ಸವ ಪ್ರಯುಕ್ತ ಭಕ್ತಕೋಡಿ ಜಂಕ್ಷನ್ ಅಲ್ಲಿ ಅಳವಡಿಸಲಾಗಿದ್ದ ಭಗವಧ್ವಜ ಕಿತ್ತು ತೆಗೆದಿರುವ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಹಾಗೂ ಭಗವದ್ವಜ ಹಾಕಿರುವವರ ಮೇಲೆ ಕೇಸ್ ದಾಖಲು ಮಾಡಿರುವುದನ್ನು ಖಂಡಿಸಿ ಹಾಗೂ ಭಗವದ್ವಜ ವಿರುದ್ಧ ಮಾನಸಿಕತೆ ಇರುವವರಿಗೆ ಸದ್ಬುದ್ದಿ ಕೊಡಲಿ ಎಂದು ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಸರ್ವೆ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಖಂಡನಾ ಸಭೆ ನಡೆಯಿತು.

ಖಂಡನಾ ಸಭೆಯಲ್ಲಿ ಸೇರಿದ್ದ ಹಿಂದೂ ಭಾಂದವರನ್ನು ಉದ್ದೇಶಿಸಿ ಹಿಂದೂ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು.ವಿಧಾನಪರಿಷತ್ ಶಾಸಕರಾದ ಕೀಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕರಾದ ಸಂಜೀವ ಮಠಂದೂರು,ವಿಶ್ವ ಹಿಂದೂ ಪರಿಷದ್‌ ಪುತ್ತೂರು ಗ್ರಾಮಾಂತರ ಪ್ರಖಂಡ ಅಧ್ಯಕ್ಷರಾದ ಜಯಂತ್ ಶೆಟ್ಟಿ ಕಂಬಳತ್ತಡ್ಡ ಹಾಗೂ ಅಕ್ಷಯ್ ರಜಪೂತ್ ಇವರು ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನ್ನಾಡಿದರು.

ನಂತರ ಗ್ರಾಮದ ಹಿಂದೂ ಮನೆಗಳಿಗೆ ತೆರಳಿ ಭಗವಧ್ವಜ ಹಾಕುವ ಕಾರ್ಯ ನಡೆಯಿತು.ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್‌ ಬಜರಂಗದಳ,ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಜಾಗರಣ ವೇದಿಕೆಯ ಪ್ರಮುಖರು,ಕಾರ್ಯಕರ್ತರು ಮತ್ತು ಸ್ಥಳೀಯ ಹಿಂದೂ ಬಾಂಧವರು ಉಪಸ್ಥಿತರಿದ್ದರು.

[t4b-ticker]
error: Content is protected !!