ಬಹುದಿನಗಳ ಬೇಡಿಕೆಯಾಗಿದ್ದ ಕೊಲ್ಲಮೊಗ್ರು ಗ್ರಾಮದ ಕೋನಡ್ಕ-ಕೊಂದಾಳ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಡಿ.25 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಆನಂತರ ಮಾತನಾಡಿದ ಶಾಸಕರು “ಬಹುಕಾಲದ ಬೇಡಿಕೆ ತಕ್ಷಣ ಈಡೇರಲಿ ಹಾಗೂ ಇದು ಇನ್ನು ಮುಂದೆ ಸದಾಕಾಲ ಜನರ ಅನುಕೂಲಕ್ಕೆ ದೊರೆಯಲಿ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಕಟ್ಟ, ಉಪಾಧ್ಯಕ್ಷರಾದ ಮಾಧವ ಚಾಂತಾಳ, ಗುತ್ತಿಗೆದಾರರಾದ ಮನುದೇವ ಪರಮಲೆ, ಬೂತ್ ಅಧ್ಯಕ್ಷರಾದ ಹೂವಪ್ಪ ಸಂಪ್ಯಾಡಿ, ಕಾರ್ಯದರ್ಶಿ ಹರೀಶ್ ಬಳ್ಳಡ್ಕ, ಪ್ರಮುಖರಾದ ಡ್ಯಾನಿ ಯಳದಾಳು, ಚಂದ್ರಶೇಖರ ಕೋನಡ್ಕ, ಅಣ್ಣಪ್ಪ ಕೋನಡ್ಕ, ಯೋಗೀಶ್ ಬಾಳೆಕಜೆ, ಶೇಖರ್ ಕೊಂದಾಳ, ಮಿಥುನ್ ಪೈಲೂರು, ಪವನ್ ಕೋನಡ್ಕ, ಗುರು ಕೋನಡ್ಕ, ರಾಜಣ್ಣ ನೆಲ್ಲಿಪುಣಿ, ಪುರುಷೋತ್ತಮ ಕೋನಡ್ಕ, ಚೆನ್ನಕೇಶವ ಕೋನಡ್ಕ ಹಾಗೂ ಆ ಭಾಗದ ಎಲ್ಲಾ ಫಲಾನುಭವಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.













































