ಅದ್ದೂರಿ ಕಾಪು ಕಡಲ ಪರ್ಬ – 2025 | ಸಂಸದ ಬಿ ವೈ ರಾಘವೇಂದ್ರ ಬಾಗಿ

Picture of Savistara

Savistara

Bureau Report

ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ನೇತೃತ್ವದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಪ್ರಯುಕ್ತ ಕಾಪು ಲೈಟ್ ಹೌಸ್ ಬಳಿ ಆಯೋಜಿಸಲಾದ “ಕಾಪು ಕಡಲ ಪರ್ಬ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ, ಕರಾವಳಿಯ ಸಾಂಸ್ಕೃತಿಕ ವೈಭವ,

ಜನಸ್ಪಂದನೆ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸಿದರು.

ಸಮುದ್ರತೀರದ ಈ ಮಹೋತ್ಸವವು ಸಂಸ್ಕೃತಿ ಸಂರಕ್ಷಣೆಗೂ, ಪ್ರವಾಸೋದ್ಯಮ ಉತ್ತೇಜನಕ್ಕೂ ವಿಶೇಷ ಕಿರಣ ನೀಡಿತು.

ಈ ಸಂದರ್ಭದಲ್ಲಿ ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ,

ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ನವೀನ್ ಕುತ್ಯಾರ,

ಬೈಂದೂರು ಮಂಡಲ ಅಧ್ಯಕ್ಷರಾದ ಶ್ರೀಮತಿ ಅನಿತಾ ಆರ್.ಕೆ. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕರಾವಳಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಜನಸೇವೆಯ ಪಥದಲ್ಲಿ ನಮ್ಮ ಬದ್ಧತೆ ಸದಾ ಮುಂದುವರಿಯಲಿದೆ.

[t4b-ticker]
error: Content is protected !!