ಜೂನ್‌ಗೆ 7 ಮಂದಿ ವಿಧಾನಪರಿಷತ್ ಸದಸ್ಯರು ನಿವೃತ್ತಿ: ಶೀಘ್ರ ಚುನಾವಣೆ

Picture of Savistara

Savistara

Bureau Report

ಬೆಂಗಳೂರು: ರಾಜ್ಯದಲ್ಲಿ ಜೂನ್ 26ಕ್ಕೆ ತೆರವಾಗಲಿರುವ ನಾಲ್ಕುರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಜೂನ್ 18ಕ್ಕೆ ದಿನಾಂಕ ಘೋಷಣೆಯಾಗಿದೆ. ಇದರ ಮಧ್ಯೆ ವಿಧಾನಪರಿಷತ್ತಿನ 7 ಸ್ಥಾನಗಳ ಅವಧಿ ಜೂನ್ 30ಕ್ಕೆ ಅಂತ್ಯವಾಗಲಿದ್ದು, ಜೂನ್ ತಿಂಗಳಲ್ಲಿ ಸಂಸತ್ತಿನ ಮತ್ತು ವಿಧಾನಮಂಡಲದ ಮೇಲ್ಮನೆಗೆ ನಡೆಯಲಿದೆ.ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಿದ್ದ ಏಳು ಮಂದಿ ಸದಸ್ಯರ ಅವಧಿ ಜೂನ್ 30ಕ್ಕೆ ಕೊನೆಗೊಳ್ಳಲಿದೆ. ಈ ಸ್ಥಾನಗಳಿಗೆ ಚುನಾವಣೆ ನಡೆಸಲು ಮುಂದಿನ ವಾರ ಇಲ್ಲವೇ ಜೂನ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ. ನಿವೃತ್ತಿ ಹೊಂದಲಿರುವ 7 ಸದಸ್ಯರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಮೂವರು, ಜೆಡಿಎಸ್ ನ ಒಬ್ಬ ಸದಸ್ಯ ಇದ್ದಾರೆ.

ಜುಲೈ-ನವೆಂಬರ್‌ನಲ್ಲಿ ಮತ್ತೆರಡು ಚುನಾವಣೆ:

ಇದಲ್ಲದೆ ಜುಲೈ ಮತ್ತು ನವೆಂಬರ್ ತಿಂಗಳಲ್ಲಿ ವಿಧಾನಪರಿಷತ್ ಗೆ ಮತ್ತೆರಡು ಚುನಾವಣೆ ನಡೆಯಲಿದೆ. 2026ರ ಜುಲೈ 21ಕ್ಕೆ ನಾಮನಿರ್ದೇಶನದ ಕೋಟಾದ ಐವರು ಸದಸ್ಯರ ಅವಧಿ ಮುಗಿಯಲಿದ್ದು ಈ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದೇ ರೀತಿ 2026ರ ನವೆಂಬರ್ 11ಕ್ಕೆ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳ ಸದಸ್ಯರ ಅವಧಿ ಮುಗಿಯಲಿದ್ದು, ಈ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ವರ್ಷದ ಜೂನ್ ನಿಂದ ನವೆಂಬರ್ ತಿಂಗಳಲ್ಲಿ ವಿಧಾನಪರಿಷತ್ತಿನ ಒಟ್ಟು 16 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಜೂನ್ 30ಕ್ಕೆ ನಿವೃತ್ತಿ ಆಗಲಿರುವವರು (ವಿಧಾನಸಭೆಯಿಂದ ವಿಧಾನಪರಿಷತ್)

1.ಗೋವಿಂದರಾಜು-ಜೆಡಿಎಸ್

2.ನಸೀರ್ ಅಹ್ಮದ್-ಕಾಂಗ್ರೆಸ್

3. ಎನ್.ನಾಗರಾಜ್ (ಎಂಟಿಬಿ)-ಬಿಜೆಪಿ

4.ಕೆ.ಪ್ರತಾಪಸಿಂಹ ನಾಯಕ್-ಬಿಜೆಪಿ

5.ಸುನೀಲ್ ವಲ್ಯಾಪುರೆ-ಬಿಜೆಪಿ6. ಬಿ.ಕೆ.ಹರಿಪ್ರಸಾದ್-ಕಾಂಗ್ರೆಸ್

7.ತಿಪ್ಪಣ್ಣಪ್ಪ ಕಮಕನೂರು-ಕಾಂಗ್ರೆಸ್ನಾ

ನಾಮನಿರ್ದೇಶನ (ಜುಲೈ 21ಕ್ಕೆ ಅವಧಿ ಅಂತ್ಯ)

1.ಎಚ್.ವಿಶ್ವನಾಥ್-ಬಿಜೆಪಿ

2.ಭಾರತಿ ಶೆಟ್ಟಿ-ಬಿಜೆಪಿ

3. ಶಾಂತಾರಾಮ ಸಿದ್ದಿ-ಬಿಜೆಪಿ

4.ಡಾ. ತಳವಾರ ಸಾಬಣ್ಣ-ಬಿಜೆಪಿ

5. ರಮೇಶ್ ಬಾಬು-ಕಾಂಗ್ರೆಸ್

ಶಿಕ್ಷಕರ ಕ್ಷೇತ್ರ (ನವೆಂಬರ್ 11ಕ್ಕೆ ಅವಧಿ ಅಂತ್ಯ)

1. ಶಶಿಲ್ ಜಿ. ನಮೋಶಿ-ಬಿಜೆಪಿ

2. ಪುಟ್ಟಣ-ಕಾಂಗ್ರೆಸ್‌

ಪದವೀಧರ ಕ್ಷೇತ್ರ (ನವೆಂಬರ್ 11ಕ್ಕೆ ಅವಧಿ ಅಂತ್ಯ)

1. ಚಿದಾನಂದ ಎಂ. ಗೌಡ-ಬಿಜೆಪಿ

2. ಎಸ್.ವಿ.ಸಂಕನೂರು-ಬಿಜೆಪಿ

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!