ಆರೆಸ್ಸೆಸ್‌ ನೋಂದಾಯಿಸಿದರೆ ಎಲ್ಲವೂ ಸರಿ ಆಗತ್ತೆ: ಪ್ರಿಯಾಂಕ್ ಖರ್ಗೆ

Picture of Savistara

Savistara

Bureau Report

ಬೆಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲ ಮಾಡಿದ್ದೂ ನಾನೇ ಎನ್ನುವ ಚೌಕಿದಾರ, ಚಂದಾ ಚೋರಿ ಆಗಿದ್ದರೂ ಗಪ್‌ಚುಕ್ ಆಗಿರುವುದೇಕೆ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಹುಟ್ಟಿದ್ದೇ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ. ವಿಎಚ್‌ಪಿಯವರೇ ಅಯೋಧ್ಯಾ ರಾಮಮಂದಿರ ಟ್ರಸ್ಟ್‌ನಲ್ಲಿ ಇದ್ದಾರೆ. ಚೌಕಿದಾರನೇ ಕಾಪಾಡದಿದ್ದರೆ ಏನು ಮಾಡಬೇಕು? ಮರುಪ್ರಶ್ನೆ ಹಾಕಿದರು.

ರಾಮನ ಪ್ರಾಣಪ್ರತಿಷ್ಠಾಪನೆ, ರಾಮಮಂದಿರದ ಉದ್ಘಾಟನೆ ಮಾಡಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲವನ್ನೂ ನಾನೇ ಮಾಡಿದ್ದು ಎನ್ನುವ ಚೌಕಿದಾರ್ ಚಂದಾ ಚೋರಿ ಆಗುತ್ತಿದ್ದಂತೆ ಗಪ್‌ಚುಪ್ ಆಗಿರುವುದು ಏಕೆ? ಇದಕ್ಕೇ ಹೇಳುವುದು, ನೋಂದಣಿ ಮಾಡಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಪುನರುಚ್ಛರಿಸಿದರು.

[t4b-ticker]
error: Content is protected !!