ನವದೆಹಲಿ: ರಂಜಾನ್ ಮಾಸ ಇಂದಿನಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರಿಗೆ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ರಂಜಾನ್ ಮಾಸ ಆರಂಭವಾಗಿದ್ದು, ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರಲಿ’ ಎಂದು ಹಾರೈಸಿದ್ದಾರೆ.
‘ಈ ಪವಿತ್ರ ತಿಂಗಳು ಆತ್ಮಾವಲೋಕನ, ಕೃತಜ್ಞತೆ ಮತ್ತು ಭಕ್ತಿಯ ಮಹತ್ವವನ್ನು ಸಾರುತ್ತದೆ. ಜೊತೆಗೆ ಕರುಣೆ, ದಯೆ ಮತ್ತು ಸೇವೆಯ ಮೌಲ್ಯಗಳನ್ನು ನೆನಪಿಸುತ್ತದೆ. ರಂಜಾನ್ ಮುಬಾರಕ್’ ಎಂದು ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ರಂಜಾನ್ ಉಪವಾಸ ಆಚರಣೆಯ ಅರ್ಥವೇನು?
ರಂಜಾನ್ ತಿಂಗಳು ಮುಸಲ್ಮಾನರಿಗೆ ಅತೀವ ಮಹತ್ವದ ತಿಂಗಳಾಗಿದೆ. ರಂಜಾನ್ ಅಲ್ಲಾಹನಿಂದ ದೊರೆತ ದೊಡ್ಡ ಇನಾಮು ಇದ್ದಂತೆ ಎಂದು ಹಲವಾರು ಹದೀಸುಗಳು ಇದರ ಮಹತ್ವವನ್ನು ಸಾರಿ ಹೇಳುತ್ತಿವೆ.













































